Wednesday 16 November 2016

ರಾಷ್ಟ್ರ ಹಾಗೂ ರಾಷ್ಟ್ರೀಯತೆಯ ವಾಗ್ವಾದ: ಅಂಬೇಡ್ಕರ್ ಚಿಂತನೆಯ ಬೆಳಕಿನಲ್ಲಿ ಮರು ಪರಿಶೀಲನೆ. . ಡಾ.ಕಿರಣ್ ಎಂ ಗಾಜನೂರು .

  ಹೊನ್ನಾವರದ ಸಹಯಾನ ಬಳಗ ಅಯೋಜಿಸಿದ್ದ                                  “ರಾಷ್ಟ್ರ ಹಾಗೂ ರಾಷ್ಟ್ರೀಯತೆಯ ವಾಗ್ವಾದಅಂಬೇಡ್ಕರ್ ಚಿಂತನೆಯ  ಬೆಳಕಿನಲ್ಲಿ                                            

ಮರು ಪರಿಶೀಲನೆ” ಎಂಬ ವಿಷಯದ ಕುರಿತು ಮಾಡಿದ ಭಾಷಣದ ಬರಹ ರೂಪ. . 

ಆದರೆ ನನಗೆ ಅನ್ನಿಸುವಂತೆ ಇಂದು ನಮ್ಮ ಬೌದ್ಧಿಕ ವಲಯ ಅಂಬೇಡ್ಕರ್ ಚಿಂತನೆಗಳನ್ನು ಒಳಗೊಳ್ಳುವುದಕ್ಕೆ ವ್ಯಯಿಸಬೇಕಾದ ಶ್ರಮದ ಏರಡರಷ್ಟು ಶ್ರಮವನ್ನು ಅಂಬೇಡ್ಕರ್ ಚಿಂತನೆಗಳನ್ನುಬೇರೆ ಬೇರೆ ಪಕ್ಷಸಿದ್ಧಾಂತಗಳಿಂದ ಬಿಡಿಸುವುದಕ್ಕೆ ವ್ಯಯಿಸಬೇಕಿದೆ ಅನ್ನಿಸುತ್ತಿದೆ ಅರ್ಥದಲ್ಲಿ ಇಂದು ನಮಗೆ ಅಂಬೇಡ್ಕರ್ ಚಿಂತನೆಗಳನ್ನು ಒಳಗೊಳ್ಳುವುದಕ್ಕಿಂತ ಅವುಗಳನ್ನು ಅಧಿಕಾರ/ಮತ ರಾಜಕಾರಣಕ್ಕಾಗಿ ಸಂಕುಚಿತವಾಗಿ ನಿರೂಪಿಸುತ್ತಿರುವ ಜನರಿಂದಸಂಘಟನೆಗಳಿಂದ ವಿಮೋಚನೆಗೊಳಿಸುವುದು ಬೌದ್ದಿಕ ವಲಯದ ಮಹತ್ವದ ಮತ್ತು ಅದ್ಯತೆ ಮತ್ತುಜವಾಬ್ದಾರಿಯಾಗಿದೆ ಎನ್ನಿಸುತ್ತಿದೆ. . .
೨೧ನೇ ಶತಮಾನದ ಈ ದಿನಗಳಲ್ಲಿ ನಾವು ನಾಗರೀಕತೆ, ಪ್ರಜಾಪ್ರಭುತ್ವ, ದೇಶ, ಜಾಗತೀಕರಣ, ಯುದ್ಧ, ಅಭಿವೃದ್ಧಿ ಇತ್ಯಾದಿ ಇತ್ಯಾದಿ ನೂರಾರು ನುಡಿಗಟ್ಟುಗಳನ್ನು ಕಟ್ಟಿಕೊಂಡಿದ್ದೇವೆ ಒಂದು ಅರ್ಥದಲ್ಲಿ ಈ ಶತಮಾನದ ಬಹುಪಾಲು ಬೌದ್ದಿಕ ವಲಯ ಈ ಪ್ರಯತ್ನದಲ್ಲಿಯೇ ಮುಳುಗಿ ಹೋಗಿದೆ. ಜಗತ್ತಿನ ಎಲ್ಲಾ ವಿದ್ಯಮಾನಗಳನ್ನು ವಿವರಿಸುವ ಭಾಷೆ ಕಂಡುಕೊಂಡ ಬುದ್ದಿಜೀವಿಗಳು ನಮ್ಮ ನಡುವಿನ ಬಡವನ/ಶೋಷಿತನ ನೋವುಗಳನ್ನು ವಿವರಿಸುವ ಬಾಷೆಯೊಂದನ್ನು, ಅವರ ನೋವಿಗೆ ಧ್ವನಿಯಾಗುವ ನುಡಿಗಟ್ಟೂಂದನ್ನು ಕಟ್ಟುವಲ್ಲಿ ಸೋತಿದ್ದಾರೆ ಅಥವಾ ಅದು ನಮ್ಮ ಅದ್ಯತೆಯ ಪ್ರಶ್ನೆಯಾಗಿ ರೂಪುಗೊಂಡಿಲ್ಲ Where is the language of suffering? ಬಡವನ, ಶೋಷಿತನ ನೋವನ್ನು ವಿವರಿಸುವ ಭಾಷೆ ಎಲ್ಲಿದೆ? ಯಾವಾಗ ನಾವು ನಮ್ಮ ನಡುವಿನ ಜನರ ನೋವನ್ನು, ಹಿಂಸೆಯನ್ನು ವಿವರಿಸುವ ನುಡಿಗಟ್ಟೊಂದನ್ನು ಕಟ್ಟುವ ಕುರಿತು ತಿರ್ವವಾಗಿ ಅಲೋಚಿಸುತ್ತೇವೆಯೋ ಅಂದು ನಾವು ನಾಗರೀಕರಾಗುತ್ತೇವೆ ಎಂದು ಪ್ರಸಿದ್ಧ ಚಿಂತಕರೊಬ್ಬರು ಒಮ್ಮೆ ಗಟ್ಟಿಯಾಗಿ ಮಾತನಾಡಿದ್ದರು ಹಾಗೆ ಮಾತನಾಡುತ್ತಿದ್ದ ಅವರಿಗೆ ಭೂತ ಮತ್ತು ವರ್ತಮಾನಗಳ ಯಾರ ಪ್ರಯತ್ನಗಳ ಕುರಿತು ನೀರಿಕ್ಷೆಗಳು ಇದ್ದಂತೆ ಇರಲಿಲ್ಲ. . . .
 ಅವರ ಮಾತುಗಳನ್ನು ಕೇಳುತ್ತಿದ್ದ ನನಗೆ ಆ ತಕ್ಷಣಕ್ಕೆ ಅಂಬೇಡ್ಕರ್ ನೆನಪಾಗಿದ್ದರು ಅರೆ! ಈ ದೇಶದ ನೊಂದವರಿಗೆ ಅವರ ನೋವನ್ನು ವ್ಯಕ್ತಪಡಿಸುವ ಭಾಷೆಯನ್ನು ಕಲಿಸುವ ಪ್ರಯತ್ನವೇ ಅವರಿಡಿ ಬದುಕಲ್ಲವೆ? ಈ ಸಮಾಜದಲ್ಲಿ ಮನುಷ್ಯನಾಗಿ ಬಾಳುವುದಕ್ಕೆ ನೀವು ಅನರ್ಹ ಎಂಬ ಅವಮಾನ, ಅಪಮಾನಗಳನ್ನು ಸಹಿಸಿಕೊಂಡು ಅವರು ನಡೆಸಿದ ಹೋರಾಟ ನೊಂದವರ ನೋವಿಗಾಗಿಯೇ ಅಲ್ಲವೆ ಎನ್ನಿಸಿತ್ತು! ಆದರೆ ಇಂದು ಅವರ ಪ್ರಯತ್ನವೆ ಅರ್ಥವಾಗದ ವಿಸ್ಮೃತಿಗೆ ನಾವು ಒಳಗಾಗಿದ್ದೇವೆ ಅನ್ನಿಸುತ್ತಿದೆ ಅವರು ಕಲಿಸಲು ಆರಂಭಿಸಿದ್ದ ಹಸಿದವನ, ತುಳಿತಕ್ಕೆ ಒಳಗಾದವನ ನೋವನ್ನು ವಿವರಿಸುವ ಭಾಷೆಯೊಂದರ ಪದಗಳನ್ನು ಕ್ಷುಲ್ಲಕ ಕಾರಣಗಳಿಗೆ ಮರೆಯುತ್ತಿದ್ದೇವೆ ಎಂಬ ಭಾವ ನಮ್ಮನ್ನು ಅವರಿಸುತ್ತಿದೆ ಹೀಗಿದ್ದರು ಭರವಸೆ ಬಿಡುವ ಹಾಗಿಲ್ಲ ಏಕೆಂದರೆ ನೊಂದವರು ಇನ್ನೂ ನಮ್ಮ ಸುತ್ತಲಿದ್ದಾರೆ ಅಂಬೇಡ್ಕರ್ ಅವರ ೧೨೪ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಾದರು ನಾವು ಬಾಬಾಸಾಹೇಬರ ಕುರಿತು ಸಕಾರಾತ್ಮಕವಾಗಿ ಯೋಚಿಸಬೇಕಿದೆ ವಿಶ್ವಮಾನ್ಯವಾಗಬಹುದಾದ ಚಿಂತಕನನ್ನು ಜಾತಿಗೆ, ವರ್ಗಕ್ಕೆ ಸಿಮೀತಗೊಳಿಸಿ ಸಂಕುಚಿತವಾಗಿ ನೋಡುತ್ತಿರುವ ಮಾದರಿಗಳನ್ನು ಒಡೆಯಬೇಕಿದೆ ನಿಜ ಅರ್ಥದಲ್ಲಿ ನಾವು ಅಂಬೇಡ್ಕರ್ ಅವರ ಚಿಂತನೆಗಳನ್ನು ಪುನರ್ ನಿರ್ವಚಿಸಬೇಕಿದೆ.
ಹಾಗೆ ನೋಡುವುದಾದರೆ ಸ್ವಾತಂತ್ರ‍್ಯ ನಂತರದ ಭಾರತದ ರಾಜಕೀಯ, ಬೌದ್ಧಿಕ ಮತ್ತು ಸಾಸ್ಕೃತಿಕ ಜಗತ್ತು ಬಾಬಾ ಸಾಹೇಬರ ಕುರಿತು ಸಾಕಷ್ಟು ಚರ್ಚಿಸಿದೆ, ಅವರ ಚಿಂತನೆಗಳ ಕುರಿತು ಬಹಳಷ್ಟು ಪುಟಗಳ ಸಾಹಿತ್ಯ ರಚನೆಯಾಗಿದೆ, ಇಂದಿಗೂ ಹಲವು ಚಳುವಳಿಗಳು ಅವರ ಚಿಂತನೆಗಳನ್ನು ತಮ್ಮ ಹೋರಾಟದ ಬುನಾದಿ ಮಾಡಿಕೊಂಡಿವೆ. ಹೀಗಿದ್ದಾಗಿಯೂ  ಈ ದೇಶದಲ್ಲಿ ಅತಿ ಹೆಚ್ಚಿನ ಚರ್ಚೆಗೆ, ವಿಮರ್ಶೆಗೆ, ಟೀಕೆಗೆ ಒಳಗಾದ ವ್ಯಕ್ತಿ ಮತ್ತು  ಚಿಂತನೆಗಳು ಇದ್ದರೆ ಅವು ಅಂಬೇಡ್ಕರ್ ಚಿಂತನೆಗಳೆ ಅನ್ನಿಸುತ್ತದೆ. ಅರೆ! ಒಂದಿಡೀ ತಲೆಮಾರಿನ ಇತಿಹಾಸವನ್ನು ತಳಸಮುದಾಯಗಳ ನೆಲೆಯಿಂದ ನಿರೂಪಿಸಲು ಯತ್ನಿಸಿದ, ಆ ಕಾರಣಕ್ಕೆ ತಮ್ಮ ವಯಕ್ತಿಕ ಬದುಕನ್ನು ಮುಡಿಪಾಗಿಟ್ಟ ಪ್ರಾಮಾಣಿಕ ವ್ಯಕ್ತಿಯೊಬ್ಬರ ಚಿಂತನೆಗಳು ಏಕೆ ಇಷ್ಟೊಂದು ವಿಮರ್ಶೆಗೆ, ಟೀಕೆಗೆ ಒಳಗಾಗುತ್ತಿವೆ? ಏಕೆ ನಮ್ಮ ಸಮಾಜದ ಎಲ್ಲಾ ವರ್ಗಗಳು ಅಂಬೇಡ್ಕರ್ ಅವರನ್ನು ಮುಕ್ತವಾಗಿ ಒಳಗೊಳ್ಳಲು ಸಾಧ್ಯವಾಗುತ್ತಿಲ್ಲ? ಅದಕ್ಕಿರುವ ಅಡ್ಡಿಗಳೇನು? ಎಂಬ ಪ್ರಶ್ನೆಗಳನ್ನು ರೂಪಿಸಿಕೊಂಡು ಯೋಚಿಸಿದರೆ ಅಂಬೇಡ್ಕರ್ ಚಿಂತನೆಗಳನ್ನು ನಿರ್ವಹಿಸುತ್ತಿರುವ ನಮ್ಮ ಬೌದ್ಧಿಕ ವಲಯ ಸಮಾನ ಸಮಾಜದ ಕುರಿತ ಬಾಬಾ ಸಾಹೇಬರ ಖಾಳಜಿಯನ್ನು ಪೀಳಿಗೆಗಳಿಗೆ ಸಕಾರಾತ್ಮಕವಾಗಿ ಹಸ್ತಾಂತರಿಸುವಲ್ಲಿ ಎಲ್ಲೂ ಎಡವಿದೆ ಅನ್ನಿಸುತ್ತಿದೆ ಈ ಹಿನ್ನಲೆಯಲ್ಲಿ ಅವರ ಕುರಿತಾದ ಇದುವರೆಗಿನ ಚರ್ಚೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಭಿಮ್ ರಾವ್ ಅವರ ಕುರಿತ ನಮ್ಮ ಕಾಲದ ಬಹುಪಾಲು ಚರ್ಚೆಗಳು ಕೇಲವು ಸೀಮಿತ ಚೌಕಟ್ಟುಗಳಲ್ಲಿ ನಿರ್ವಹಿಸಲ್ಪಟ್ಟಿರುವುದನ್ನು ಗುರುತಿಸಬಹುದಾಗಿದೆ.
ಅದರಲ್ಲಿ ಮೊದಲನೇಯದು ಚಿಂತಕ ಅನಂದ್ ತೆಲ್ತುಮ್ಡೆ ಅವರು ವಿವರಿಸುವಂತೆ ನಮ್ಮ ನಡುವಿನ ವಿದ್ವಾಂಸರು ಇದುವರೆಗೂ ಚರ್ಚಿಸಿರುವ ಅಂಬೇಡ್ಕರರ ಚಿಂತನೆ ನಮಗೆ ಎರಡು ರೀತಿಯಾಗಿ ದಕ್ಕಿದೆ ಒಂದು ಅವರುಗಳು ಅಂಬೇಡ್ಕರ್ ಅಲೋಚನೆಗಳನ್ನು ನಮಗೆ ಬಹಳ ಪರಿಚಿತವಾಗಿರುವ ಇಂದು ಬಹಳ ಮೂಲಭೂತ  ಪ್ರಶ್ನೆಗಳಿಗೆ ಒಳಗಾಗುತ್ತಿರುವ ಸಮಾಜ ವಿಜ್ಞಾನ ಶಾಖೆಗಳಾದ ಸಾಮಾಜಿಕರಾಜಕೀಯಧಾರ್ಮಿಕ ಎಂಬಿತ್ಯಾದಿ ಶಾಖೆಗಳಲ್ಲಿ ವಿಂಗಡಿಸಿ ವಿಶ್ಲೇಷಿಸಿದ್ದಾರೆ ಈ ವಿಧಾನದಲ್ಲಿರುವ ಸಮಸ್ಯೆಯೆಂದರೆ ಅದು ಅಂಬೇಡ್ಕರ್‌ರ ಒಟ್ಟುಚಿಂತನೆಯನ್ನು ಅಕೆಡೆಮಿಕ್ ಶಿಸ್ತುಗಳಲ್ಲಿ ನಮ್ಮದಲ್ಲದ ನೆಲೆಯಲ್ಲಿ ಕೃತಕವಾಗಿ ವಿವರಿಸುತ್ತದೆ. ಇನ್ನೊಂದು ವಿಧಾನ ಸಾಹಿತ್ಯಿಕ ವಿಧಾನ  ವಿಧಾನ ಅಂಬೇಡ್ಕರ್ ಯೋಚನೆಗಳ ಕುರಿತಂತೆಯಾವುದೇ ವೈಜ್ಞಾನಿಕ ವಿಮರ್ಶೆ-ವಿಶ್ಲೇಷಣೆ ನಡೆಸದೆ ಒಂದು ಕಥನ ಮಾದರಿಯಲ್ಲಿ ವೈಭವೀಕರಣದ ನೆಲೆಯಲ್ಲಿ ಅವರನ್ನು ವಿಶ್ಲೇಷಿಸುತ್ತದೆನಮ್ಮ ನಡುವೆ ಪ್ರಖ್ಯಾತವಾಗಿರುವ ಈ ಎರಡೂವಿಧಾನಗಳು ನಮ್ಮ ಸಮಾಜದ ಕುರಿತು ತರ್ಕಬದ್ಧವಾಗಿ ಅಂಬೇಡ್ಕರ್ ಒದಗಿಸ ಬಯಸಿದ್ದ ಪ್ರಬುದ್ಧ ಚಿಂತನಾ ಲೋಕದೃಷ್ಟಿಯನ್ನು ಯತಾವತ್ತಾಗಿ ರೂಪಿಸಿಕೊಡಲು ವಿಫಲವಾಗುತ್ತವೆ ಇದು ಅಂಬೇಡ್ಕರ್ ಚಿಂತನೆಗಳನ್ನು ಒಳಗೊಳ್ಳಲು ಇರುವ ಮೊದಲ ಮಿತಿ.
ಇನ್ನೂ ತೆಲ್ತುಮ್ಡೆ ಗುರುತಿಸುವ ಎರಡನೇಯ ಮಿತಿ, ಅಂಬೇಡ್ಕರರ ನಂತರದ ಅವರ ಚಿಂತನೆಗಳ ಕುರಿತಾದ ನಮ್ಮ ಚಳುವಳಿಗಳು ಮತ್ತು ಬೌದ್ದಿಕ ಚರ್ಚೆಗಳು ಮಾನವೀಯ ಸಮಾಜದ ಕನಸನ್ನು ಹೊತ್ತ ಅಂಬೇಡ್ಕರರ ಸುತ್ತ ಕೆಲವು ಪ್ರಜ್ಞಾಪೂರ್ವಕ ಪ್ರತಿಮೆಗಳನ್ನು ಕಟ್ಟಿಬಿಟ್ಟಿವೆ! ಈ ಪ್ರತಿಮೆಗಳು ಅಂಬೇಡ್ಕರರನ್ನು ಒಬ್ಬ ಸಂವಿಧಾನದ ಕರ್ತೃವೆಂದೂಪ್ರಸ್ತುತ ವ್ಯವಸ್ಥೆಗೆ ಕಾರಣೀಭೂತರೆಂದೂ, ಒಬ್ಬ ದಲಿತರ ನಾಯಕನೆಂದೂ, ಒಬ್ಬ ದಲಿತ ರಕ್ಷಕನೆಂದೂ, ಒಬ್ಬ ಉದಾರವಾದಿ ಪ್ರಜಾಪ್ರಭುತ್ವವಾದಿಯೆಂದೂ ಬಣ್ಣಿಸುತ್ತವೆ. ಮೇಲ್ಮೋಟಕ್ಕೆ ಇವು ಅವರ ಕುರಿತು ಉದಾತ್ತವಾಗಿ ಮಾತನಾಡುತ್ತಿರುವಂತೆ ತೋರುತ್ತವೆ ಆದರೆ ವಾಸ್ತವದಲ್ಲಿ ಇವು ಅಂಬೇಡ್ಕರ್ ಅವರೊಳಗಿದ್ದ ಯಾವುದೇ ಬಗೆಯ ಶೋಷಣೆಅನ್ಯಾಯಕಪಟಗಳಿಲ್ಲದ ಮನುಷ್ಯನನ್ನು ಗುರುತಿಸಲು ಬಹಳ ದೊಡ್ಡ ತಡೆಗಳಾಗಿ ನಮ್ಮ ಮುಂದೆ ನಿಂತಿವೆ. ಬೇಸರದ ಸಂಗತಿ ಎಂದರೆ ಇಂದು ಇವೆ ಪ್ರತಿಮೆಗಳು ಅಂಬೇಡ್ಕರರನ್ನು ಜಾತಿವಾದಿಯೆಂದು, ಕೇವಲ ದಲಿತರ ನಾಯಕನೆಂದು, ಮೇಲ್ಜಾತಿ ವಿರೋಧಿ ಎಂದು ಟೀಕಿಸಲು ಬಳಕೆಯಾಗುತ್ತಿವೆ. ಅಂಬೇಡ್ಕರ್ ಕುರಿತ ಮೇಲಿನ ಪ್ರತಿಮೆಗಳನ್ನೆ ಅವರ ಪರ/ವಿರೊಧ ಗುಂಪುಗಳೆರಡು ಪರಸ್ಪರ ವಿರೋಧಕ್ಕಾಗಿ ಬಳಸಿಕೊಳ್ಳುತ್ತಿರುವುದರಿಂದ ಇವೆ ಇಂದು ಹೆಚ್ಚು ಚರ್ಚೆಗೆ ಬರುತ್ತಿವೆ ಮತ್ತು ನಕಾರಾತ್ಮಕವಾಗಿ ಜನಪ್ರಿಯಗೊಳ್ಳುತ್ತಿವೆ ಇದರ ಪರಿಣಾಮ ನಮಗೆ ವಾಸ್ತವದ ಅಂಬೇಡ್ಕರ್ ಮತ್ತು ಅವರ ಖಾಳಜಿ ಅರ್ಥವಾಗುತ್ತಿಲ್ಲ ಅಥವಾ ಆ ರೀತಿಯ ಪ್ರಯತ್ನಗಳಿಗೆ ಈ ಪ್ರತಿಮೆಗಳೆ ತಡೆಗಳಾಗಿವೆ ಇದು ಅಂಬೇಡ್ಕರ್ ಅವರನ್ನು ಒಳಗೊಳ್ಳಲು ಇರುವ ಎರಡನೇಯ ಸೀಮಿತ ಚೌಕಟ್ಟು.
ಇನ್ನೂ ಮೂರನೇಯದು ಮತ್ತು ಅತಿ ಮುಖ್ಯವಾದದು ನಮ್ಮ ನಡುವಿನ ವಿದ್ವತ್ ವಲಯದ ಬಹುಪಾಲು ಚಿಂತಕರು ಇಂದಿಗೂ ಒಂದು ನಿರ್ದಿಷ್ಟ ಮತ್ತು ಸಂಕುಚಿತ ರಾಜಕೀಯ ಕಾರಣಕ್ಕಾಗಿ ಡಾ. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಇಬ್ಬರನ್ನು ವಿರುದ್ಧ ದಿಕ್ಕಿನಲ್ಲಿ ಕಲ್ಪಿಸಿಕೊಂಡು ಪರಸ್ಪರ ದೋಷಾ­ರೋಪಣೆ ಮಾಡುವುದನ್ನೇ ಬಹಳ ದೊಡ್ಡ ಬೌದ್ಧಿಕ ಜಿಜ್ಞಾಸೆ ಎಂಬಂತೆ ಚರ್ಚಿಸುತ್ತಿರುವುದು. ಇದರ ಪರಿಣಾಮ ಇಂದು ಬಹುಪಾಲು ಯುವಕರಿಗೆ ವಾಸ್ತವದ ಅಂಬೇಡ್ಕರ್‌­ಗಿಂತ ಗಾಂಧಿಯವರೊಂದಿಗೆ ಈ ಸಮಾಜದ ಕುರಿತು ತಾತ್ವಿಕ ವಿರೋಧವಿದ್ದ ಅಂಬೇಡ್ಕರ್ ಹೆಚ್ಚು ಪರಿಚಿತನಿದ್ದಾನೆ. ಒಂದು ನಿರ್ದಿಷ್ಟ ಐತಿಹಾಸಿಕ ಸಂದರ್ಭದಲ್ಲಿ ಜನಿಸಿದ ಈ ಪರಸ್ಪರ ವಿರೋಧದ ನೆಲೆಯ ಈ ಚಿಂತನೆ ಈ ಸಮಾಜಕ್ಕೆ ಆ ಮೇರು ವ್ಯಕ್ತಿತ್ವಗಳು ನೀಡಿದ ಕಾಣಿಕೆ ಮತ್ತು ಮಹತ್ವವನ್ನು ಸಂಕುಚಿತಗೊಳಿಸಿ ಅವರನ್ನು ಪರ-ವಿರೋಧ­-ವೆಂಬ ಸಂಕುಚಿತ ಚೌಕಟ್ಟಿನಲ್ಲಿ  ಗ್ರಹಿಸಿಸುತ್ತಿದೆ ಇದು ನಮ್ಮ ಕಾಲದ ದುರಂತ ಮತ್ತು ಅಂಬೇಡ್ಕರ್ ಅವರನ್ನು ಒಳಗೊಳ್ಳಲು ಇರುವ ಪ್ರಮುಖ ತಡೆ.
ಇಂದು ಇಲ್ಲಿ ಚರ್ಚೆಗೆ ಒಳಗಾಗುತ್ತಿರುವ ವಿಷಯವಾದ ರಾಷ್ಟ್ರ ಹಾಗೂ ರಾಷ್ಟ್ರೀಯತೆಯ ಕುರಿತ ಅಂಬೇಡ್ಕರ್ ನಿಲುವುಗಳು ಮೇಲೆ ಪ್ರಸ್ಥಾಪಿಸಿದ ಮಿತಿಗಳಿಂದ ಹೋರತಾಗಿಲ್ಲಎಂಬುದು ನನ್ನ ತಿಳುವಳಿಕೆ  ಕಾರಣಕ್ಕೆ ಇಂದಿನ ಸಮಕಾಲೀನ ಸಂಧರ್ಭದಲ್ಲಿ ಅಂಬೇಡ್ಕರ್ ಅವರನ್ನು ಒಳಗೊಳ್ಳುವುದಕ್ಕಿಂತ ಅವರನ್ನು ಹಿಡಿದಿಟ್ಟಿರುವ 20ನೇ ಶತಮಾನದ ರಾಜಕೀಯ, ಸಾಂಸ್ಕೃತಿಕ ಶುಷ್ಕ ಪ್ರತಿಮೆಗಳಿಂದ ಅವರನ್ನು ಬಿಡಿಸಬೇಕಿರುವುದು ಅದ್ಯತೆಯ ಕೆಲಸವಾಗಿದೆ . . . .
ಬಾಬಾ ಸಾಹೇಬರ ರಾಷ್ಟ್ರರಾಷ್ಟ್ರೀಯತೆಯ ಚಿಂತನೆಗಳನ್ನು ನೋಡುವುದಾದರೂ ಅಂಬೇಡ್ಕರ್ ಅವರು ತಮ್ಮ ಮಹತ್ವದ ಬರಹಗಳಾದ ಅನ್ಹೀಲೆಷನ್ ಆಫ್ ಕಾಸ್ಟ್ರೆವ್ಯುಲೂಷನ್ &ಕೌಂಟರ್ ರೆವ್ಯುಲೂಷನ್ಮತ್ತು A Nation Calling for Home. PART-I Muslim Case For Pakistan ಎಂಬ ಕೃತಿಗಳಲ್ಲಿ ರಾಷ್ಟ್ರರಾಷ್ಟ್ರೀಯತೆ ಕುರಿತಂತೆ ವಿಸ್ತಾರವಾಗಿಚರ್ಚಿಸುತ್ತಾರೆ ಅವರ ಪ್ರಕಾರ. . .
ಮೇಲಿನ ಬರಹಗಳಲ್ಲಿ ಬಾಬಾ ಸಾಹೇಬರು ರಾಷ್ಟ್ರ, ರಾಷ್ಟ್ರೀಯತೆ ಎಂದರೆ ಏನು? ಎಂಬುದನ್ನು ವಿವರಿಸುತ್ತಾ ರಾಷ್ಟ್ರೀಯತೆರಾಷ್ಟ್ರೀಯವಾದವಾಗಲು ಎರಡು ಮೂಲಭೂತಅಂಶಗಳು ಇರಬೇಕು ಮೊದಲನೆಯದು ಒಂದು ರಾಷ್ಟ್ರವಾಗಿ ಬದುಕುವ ಇಚ್ಚೆ ಅಲ್ಲಿನ ಜನರಲ್ಲಿ ಇರಬೇಕುರಾಷ್ಟ್ರೀಯತೆಯೆಂಬುದು  ಇಚ್ಚೆಯ ಮೂರ್ತರೂಪ ಇನ್ನೂ ಎರಡನೇಯದುರಾಷ್ಟ್ರೀಯತೆಯ ಇಚ್ಚೆಯನ್ನು ಇಟ್ಟುಕೊಂಡು ಅದನ್ನೊಂದು ರಾಷ್ಟವಾಗಿಸುವತಮ್ಮದೆ ಸಾಂಸ್ಕೃತಿಕ ನೆಲೆಯಾಗಿ ಒಂದು ದೇಶವಾಗಿ ಸ್ಥಾಪಿಸಿಕೊಳ್ಳಲು ಅಗತ್ಯವಾದ ಭೂ ಪ್ರದೇಶ ಇರಬೇಕು ಎಂಬ ವಾದವನ್ನು ಮುಂದಿಡುತ್ತಾರೆ. . .
ಮುಂದುವರಿದು ಭಾರತ ಸಮಾಜದಲ್ಲಿ ಒಂದು ರಾಷ್ಟ್ರವಾಗಲು ಬೇಕಾದ ಸಾಮೂಹಿಕ ಇಚ್ಚೆ (consciousness of kindಕಾಣಲು ಸಾಧ್ಯವಿಲ್ಲ ಇಲ್ಲಿನ ನಾಗರೀಕನಿಗೆ ಇಚ್ಚೆಎಂಬುದು ಇದ್ದರೆ ಅದು ತನ್ನ ಜಾತಿಯ ಕುರಿತಾದ ಇಚ್ಚೆ( Caste consciousness)  ಕಾರಣಕ್ಕೆ ಹಿಂದೂಗಳು ಒಂದು ಸಮಾಜ ಹಾಗೂ ರಾಷ್ಟ್ರವನ್ನು ನಿರ್ಮಿಸಿಕೊಳ್ಳಲಾಗಿಲ್ಲಆದರೆ ಇಲ್ಲಿನ ಬಹಳ ಜನ ನಾವು ಒಂದು ರಾಷ್ಟ್ರ ಅಲ್ಲ! ಬೇರೆ ಬೇರೆ ಗುಂಪಿಗೆ ಸೇರಿದ ಜನ ಸಮೂಹ ಎಂಬುದನ್ನು ಒಪ್ಪಲಾರರು ಅದಕ್ಕೆ ಬದಲಾಗಿ ಅವರು ಭಾರತದಲ್ಲಿನ ಜನ ಸಮೂಹದ ನಡುವೆಆಚರಣೆಅಲೋಚನೆ ಮತ್ತು ನಂಬಿಕೆಗಳಲ್ಲಿ ಒಂದು ಸಾಮ್ಯತೆ ಇದೆ ಎಂಬ ವಾದವನ್ನು ಮುಂದಿಡುತ್ತಾರೆ.  ಆದರೆ ಆಚರಣೆಅಲೋಚನೆ ಮತ್ತು ನಂಬಿಕೆಗಳಲ್ಲಿ ಇರುವ ಸಾಮ್ಯತೆ ಇದ್ದ ಮಾತ್ರಕ್ಕೆ ನಾವು ಒಂದು ಸಮಾಜ ಮತ್ತು ರಾಷ್ಟ್ರವನ್ನು ಹೊಂದಿದ್ದೇವೆ ಎಂಬ ತಿರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂಬ ವಾದವನ್ನು ಅಂಬೇಡ್ಕರ್ ಮುಂದಿಡುತ್ತಾರೆ. .
ಮುಂದುವರಿದು ಏಕೆ ಹಿಂದೂಯಿಸಂನಲ್ಲಿನ “ಜಾತಿ” ಹಿಂದೂಗಳು ಒಂದು ಸಮಾಜವಾಗಿ ರೂಪುಗೊಳ್ಳಲು ತಡೆಯಾಗಿದೆ, ಬೇರೆ ಧರ್ಮಗಳಲ್ಲಿ ಜಾತಿಗಳಿದ್ದರು ಅಲ್ಲಿ ಏಕೆ ರೀತಿಯ ತಡೆಗಳಿಲ್ಲ ಎಂಬುದನ್ನು ಸವಿಸ್ತಾರವಾಗಿ ವಿವರಿಸುತ್ತಾ ಪ್ರಜಾಪ್ರಭುತ್ಬದ ಮೂಲ ತತ್ವವಾದ ಸಮಾನತೆಯನ್ನು ಪೋಷಿಸುವ ಯಾವ ಲಕ್ಷಣಗಳು ಜಾತಿ ಆಧಾರಿತ ಹಿಂದೂಸಾಮಾಜಿಕ ವ್ಯವಸ್ಥೆಯಲ್ಲಿ ಇಲ್ಲವಾದ್ದರಿಂದ ಜಾತಿ ಮುಕ್ತ ಸಮಾಜವೊಂದೆ ಉತ್ತಮ ರಾಷ್ಟ ನಿರ್ಮಾಣಕ್ಕಿರುವ ರಹದಾರಿ ಎಂದು ಅಂಬೇಡ್ಕರ್ ಪ್ರತಿಪಾದಿಸುತ್ತಾರೆ.  ಕಾರಣಕ್ಕೆ ಅವರಬರಹಗಳಲ್ಲಿ ವ್ಯಾಪಕವಾಗಿ ಸಾಮಾಜಿಕ ಸ್ವರಾಜ್ಯದ ಮಾತುಗಳು ಮತ್ತೆ ಮತ್ತೆ ವ್ಯಕ್ತವಾಗುತ್ತವೆ ಎಲ್ಲಿಯವರೆಗು ನಾವು  ದೇಶದಲ್ಲಿನ ಜಾತಿ ಆಧಾರಿತ ಸಾಮಾಜಿಕ ವ್ಯವಸ್ಥೆಯನ್ನುನಾಶಗೊಳಿಸುವುದಿಲ್ಲವೂ ಅಲ್ಲಿಯವರೆಗೆ ಒಂದು ಸಮರ್ಥ ರಾಜಕೀಯ ಸಮಾಜದ ಮತ್ತು ರಾಷ್ಟ್ರದ ನಿರ್ಮಾಣ ಸಾಧ್ಯವಿಲ್ಲ ಎಂಬುದನ್ನು ಬಾಬಾ ಸಾಹೇಬರ ಸ್ಪಷ್ಟವಾಗಿ ಗುರುತಿಸುತ್ತಾರೆ. . .
ಹಾಗೆ ನೋಡುವುದಾದರೆ ಅವರ ಪ್ರಕಾರ ರಾಷ್ಟ್ರೀಯತೆ ಎಂಬುದು ಮಾನವೀಯತೆಮನುಷ್ಯ ಗೌರವಗಳ ಇನ್ನೊಂದು ರೂಪವಾಗಿತ್ತು ಕಾರಣಕ್ಕೆ ಅವರು ತಮ್ಮ ಬರಹಗಳಲ್ಲಿರಾಜಕೀಯ ಎಂಬುದನ್ನು ಮನುಷ್ಯ ಸಮಾನತೆಯನ್ನು ಪ್ರತಿಪಾಧಿಸುವ ಮತ್ತು ಅದನ್ನು ಸ್ಥಾಪಿಸಬಯಸುವ ಒಂದು ಸಾಮಾಜಿಕ ಪ್ರಜ್ಞೆಯಾಗಿ ವಿಶ್ಲೇಷಿಸಿದ್ದರು ಅವರ ಪ್ರಕಾರ ರಾಜಕೀಯಎಂಬುದು ಇಂದಿನ ದಿನಗಳಲ್ಲಿ ಚರ್ಚಿಸುತ್ತಿರುವ ಅಧಿಕಾರ/ಅಥವಾ ಮತ ರಾಜಕಾರಣವಾಗಿರಲಿಲ್ಲ ಬದಲಾಗಿ ಅದೊಂದು ಸಾಮಾಜಿಕ ಮೌಲ್ಯವಾಗಿ ಸಾಮಾನ್ಯ ಜ್ಞಾನವಾಗಿ ಶಿಕ್ಷಣ,ಸಂಘಟನೆಹೋರಾಟಗಳಿಂದ ರೂಪಿಸಿಕೊಳ್ಳಬಹುದಾದ ಮಹತ್ವದ ಸಾಮಾಜಿಕ ಪ್ರಜ್ಞೆಯಾಗಿತ್ತು. . .
ಆದರೆ ನಮ್ಮ ಕಾಲದ ದುರಂತ ಇಂದು ಅಂಬೇಡ್ಕರ್ ಚಿಂತನೆಗಳನ್ನು ಬಳಸಿಕೊಂಡು ಪ್ರಜಾತಂತ್ರ ರಾಷ್ಟ್ರ ವ್ಯವಸ್ಥೆಯ ಆಧಾರವಾದ ಮನುಷ್ಯ ಸಮಾನತೆಯ ಪರಿಭಾಷೆಯನ್ನು ಮತ್ತಷ್ಟುಪರಿಣಾಕಾರಿಯಾಗಿ ವಿವರಿಸಿಕೊಳ್ಳಬೇಕಾದ  ಹೊತ್ತಿನಲ್ಲಿ ಬಾಬಾ ಸಾಹೇಬರ ಅಲೋಚನೆಗಳನ್ನು ಇಂದಿನ ಪಕ್ಷ/ಅಧಿಕಾರ ಮತ್ತು ಧಾರ್ಮಿಕ ರಾಜಕಾರಣದ ಭಾಗವಾಗಿ ವಿವರಿಸಿಕೊಂಡುಸಂಕುಚಿತಗೊಳಿಸುತ್ತಿದ್ದೇವೆ ಇದು ನಿಜವಾಗಿಯೂ  ಮಹಾನ್ ಚೇತನಕ್ಕೆ ನಾವು ಸಲ್ಲಿಸುವ ಅಗೌರವ. .
ಎಕೆಂದರೆ ಅಂಬೇಡ್ಕರ್ ಅವರ ರಾಷ್ಟ್ರೀಯತೆಯ ಚಿಂತನೆಗಳು ಎಂದಿಗೂ ಇಂದು ಮುಖ್ಯವಾಹಿನಿಯ ಚರ್ಚೆಯಲ್ಲಿರುವ ಧಾರ್ಮಿಕ ರಾಷ್ಟ್ರೀಯವಾದವನ್ನು ಒಪ್ಪಿರಲಿಲ್ಲ ಹಾಗೆನೋಡಿದರೆ ಭಾರತದ ಇತಿಹಾಸದಲ್ಲಿ ರಾಷ್ಟೀಯತೆಯ ಕಲ್ಪನೆಯ ಕುರಿತಂತೆ ಅಂಬೇಡ್ಕರ್ ಮತ್ತು ಬಲಪಂಥಿಯ ಚಿಂತನೆಗಳ ನಡುವೆ ಸೈಂಧಾಂತಿಕವಾಗಿಯೇ ಬಹಳ ದೊಡ್ಡ ಮಟ್ಟದವಿರೋಧಗಳಿದ್ದವು ಅಂಬೇಡ್ಕರ್ ಬಯಸಿದ್ದ ಭಾರತದ ರಾಷ್ಟ್ರೀಯತೆ ಜಾತ್ಯಾತೀಯ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೇಲೆ ಆಧಾರವಾಗಿದ್ದರೆಬಲಪಂಥಿಯ ಚಿಂತನೆಗಳುಮುಂದಿಡುತ್ತಿರುವ ರಾಷ್ಟ್ರೀಯತೆಯ ಕಲ್ಪನೆ ಬ್ರಾಹ್ಮಣವಾದಿ ನಿರೂಪಣೆಯನ್ನು ಆಧರಿಸಿದ ಹಿಂದೂಯಿಸಂ ಮತ್ತು ಹಿಂದೂ ರಾಷ್ಟ್ರ ಎಂಬ ಪರಿಕಲ್ಪನೆಯನ್ನು ಆಧರಿಸಿವೆ ಇವೆರಡೂಒಂದಕ್ಕೊಂದು ವಿರೋಧವಾಗಿರುವ ನೆಲೆಗಳು ಒಂದು ಅರ್ಥದಲ್ಲಿ ಬಾಬಾ ಸಾಹೇಬ್ ತಮ್ಮ ಬದುಕಿನಿದ್ದಕ್ಕೂ ಏನನ್ನು ವಿರೋಧಿಸುತ್ತಾ ಬಂದಿದ್ದರೂ ಅವೆ ಶಕ್ತಿಗಳು ಇಂದು ಅಂಬೇಡ್ಕರ್ನಮ್ಮ ಸಿದ್ಧಾಂತವನ್ನು ಒಪ್ಪಿದ್ದರು ಎಂದು ಪ್ರಚಾರ ಮಾಡುತ್ತಿವೆ(ನೋಡಿ Feb 15, 2015 ಸಂಘಪರಿವಾರದ ಮುಖ್ಯಸ್ಥ ಮೋಹನ್ ಭಾಗವತರ ಹೇಳಿಕೆ)
ಇದರ ಉದ್ದೇಶ ಇಂದು ಅಂಬೇಡ್ಕರ್ ಚಿಂತನೆಗಳನ್ನು ಅರಾಧಿಸುವ ದೊಡ್ಡ ಸಂಖ್ಯೆಯ ಜನರ ಒಪ್ಪಿಗೆಯನ್ನು ತನ್ನದಾಗಿಸಿಕೊಳ್ಳಬೇಕೆಂಬ ಸರಳ ರಾಜಕೀಯ ಆಶಯವೇ ಹೊರತುಅಂಬೇಡ್ಕರ್ ಪ್ರಸ್ತಾಪಿಸಿದ ಸಾಮಾಜಿಕ ಸ್ವಾರಾಜ್ಯ ಅಥವಾ ಸಾಮಾಜಿಕ ನ್ಯಾಯವನ್ನು ಆಧರಿಸಿದ ರಾಷ್ಟ್ರ ಕಟ್ಟುವುದಲ್ಲ  ಕಾರಣಕ್ಕೆ ಬಲಪಂಥಿಯ ಪ್ರತಿಪಾದಕರು ಅಂಬೇಡ್ಕರ್ ನಮ್ಮಸಿದ್ಧಾಂತ ಒಪ್ಪಿದ್ದರು ಎಂಬ ತರ್ಕ ಮುಂದಿಡುತ್ತಿದ್ದಾರೆಯೇ ಹೊರತು ನಾವು ಅಂಬೇಡ್ಕರ್ ಬಯಸಿದ್ದ ಜಾತಿ/ಧರ್ಮ ರಹಿತ ಸಾಮಾಜಿಕ ಸ್ವಾರಾಜ್ಯದ ಬುನಾದಿಯ ಮೇಲಿನ ರಾಷ್ಟ್ರ ಮತ್ತುರಾಷ್ಟ್ರೀಯವಾದದ ಕನಸನ್ನು/ಸಿದ್ಧಾಂತವನ್ನು ಒಪ್ಪಿದ್ದೇವೆ ಎಂದಲ್ಲ ಕಾರಣಕ್ಕೆ ಧಾರ್ಮಿಕ/ಸಾಂಸ್ಕೃತಿಕ ರಾಷ್ಟ್ರೀಯತೆಯ ವಾದಗಳನ್ನು ಗ್ರಹಿಸುವಾಗ ನಾವು ಬಹಳ ಎಚ್ಚರಿಕೆಯಿಂದಇರಬೇಕಿದೆ ಇಲ್ಲವಾದರೆ  ವ್ಯೂಹ ಎಲ್ಲರನ್ನೂ ತಮ್ಮವರಾಗಿಸಿಕೊಳ್ಳುತ್ತಾ ಸಾಗಿ ತನ್ನ ಸಿದ್ಧಾಂತಕ್ಕೆ ಶಾಸನಬದ್ಧತೆ ಒದಗಿಸಿಕೊಳ್ಳುವ ಯತ್ನವನ್ನು ಮಾಡುತ್ತಲೇ ಇರುತ್ತದೆ . . .
ಇ ಹಿನ್ನಲೆಯಲ್ಲಿ ಅಂಬೇಡ್ಕರ್ ಚಿಂತನೆಗಳನ್ನು ಬಂಧಿಸಿರುವ ಚೌಕಟ್ಟುಗಳ ಆಚೆಗೆ ಅವರ ಚಿಂತನೆಗಳನ್ನು ಮರು ನಿರೂಪಿಸಬೇಕು ಎಂಬ ವಾದಗಳು ಪ್ರಭಾವಿಯಾಗುತ್ತಿರುವ ಈ ಹೊತ್ತಿನಲ್ಲಿ ಈ ಮೇಲಿನ ಎಲ್ಲಾ ಮಿತಿಗಳನ್ನು ಮೀರುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕಿದೆ ಇನ್ನಾದರೂ ಭಾರತದ ಚಿಂತನಾಪರಂಪರೆಯ ಮುಂಚುಣಿ ನಾಯಕರು, ಹೋರಾಟಗಾರರು ಮಾನವಾತಾವಾದಿಯನ್ನು ಮತ್ತು ಅವರ ವಾದಗಳನ್ನು ರಕ್ಷಣಾತ್ಮಕವಾಗಿ ರಾಜಕೀಯ ಸರಿತನದ ಕಾರಣಕ್ಕೆಸಂಕುಚಿತವಾಗಿ ಬಳಸದೆ ವಿಶಾಲ ಅರ್ಥದಲ್ಲಿ ಒಳಗೊಳ್ಳಬೇಕಿದೆ ಮೇಲಾಗಿ ಮೇಲಿನ ಎಲ್ಲಾ ಮಿತಿಗಳ ಕುರಿತು ನಾವು ಮುಕ್ತವಾಗಿ ಚರ್ಚಿಸುವ ಅಂಬೇಡ್ಕರ್ ಬರಹ ಮತ್ತು ಬಾಷಣಗಳಲ್ಲಿ ಚರ್ಚಿತವಾಗಿರುವ ಅವರ ವಿಚಾರಗಳನ್ನು ಭಾರತೀಯ ಸಮಾಜಸಂಸ್ಕೃತಿಪರಂಪರೆ ಮತ್ತು ಆರ್ಥಿಕತೆ­ಯನ್ನು ಸಮಾನ ಸಾಮುದಾಯಿಕ ನೆಲೆಯಲ್ಲಿ ವಿವರಿಸುವ ಸಿದ್ಧಾಂತವಾಗಿ ಓದುವಬೆಳೆಸುವ ಕ್ರಮವನ್ನು ನಮ್ಮ ಬೌದ್ಧಿಕ ಪ್ರಪಂಚ ಮತ್ತು ವಿಶ್ವವಿದ್ಯಾನಿಲಯಗಳು ಮುಂದಿನ ಪೀಳಿಗೆಗಳಿಗೆರೂಪಿಸಿಕೋಡಬೇಕಿದೆ ಆ ಮೂಲಕ ಶಿಕ್ಷಣಸಂಘಟನೆಹೋರಾಟ ಎಂಬ ಮೂರು ಶಕ್ತಿಗಳನ್ನು ನಂಬಿಕೊಂಡು  ದೇಶದ ಇತಿಹಾಸವನ್ನು  ತಿದ್ದಲು ಪ್ರಯತ್ನಿಸಿದ ಒಬ್ಬ ಮೇಧಾವಿಯನ್ನು ನಾವು ಗೌರವಿಸಬೇಕಿದೆ. ನಮಗೆ ಬೇಕಿರುವುದು ನೊಂದವರ ನೋವನ್ನು ವಿವರಿಸಲು ಹಕ್ಕುಗಳು ಎಂಬ ಭಾಷೆಯನ್ನು ರೂಪಿಸಿಕೊಟ್ಟ ಸ್ವಾಭಿಮಾನಿ, ಮಾನವತಾವಾದಿ ಅಂಬೇಡ್ಕರ್ ಹೊರತು ಬೇರೆ ಯಾರೂ ಅಲ್ಲ ಆ ಕಾರಣಕ್ಕೆ ನಾವು ಅಂಬೇಡ್ಕರ್ ಅವರನ್ನು ಎಲ್ಲಾ ಶೋಷಿತರ ವಿಮೋಚಕನಾಗಿ ನೋಡಬೇಕಿದೆ.
ಡಾ.ಕಿರಣ್ ಎಂ ಗಾಜನೂರು 

“ಸಹಿಷ್ಣುತೆ ಎಂಬುದು ಗೆಲುವು”-ಶಿರಸಿಯಲ್ಲೊಂದು ಚಾರಿತ್ರಿಕ ಮಹಿಳಾ ಸಮಾವೇಶ







          “ಸಹಿಷ್ಣುತೆ ಎಂಬುದು ಗೆಲುವು” ಎಂಬುದು ಒಂದು ಮಹಿಳಾ ಸಮಾವೇಶದ ಹೆಸರಿದ್ದರೆ ನೀವು ಅಂತಹ ಸಮಾವೇಶದಿಂದ ಏನು  ನಿರೀಕ್ಷಿಸುತ್ತೀರಿ? ಬಹುಶಃ ಮಹಿಳೆಯರು ಪುರುಷರ ಬಗ್ಗೆ, ತಮ್ಮ ಮೇಲೆ ನಡೆಯುತ್ತಿರುವ ತಾರತಮ್ಯ, ಅನ್ಯಾಯ, ದೌರ್ಜನ್ಯಗಳ ಬಗ್ಗೆ ‘ಸಹಿಷ್ಣು’ಗಳಾಗಿರಬೇಕೆಂಬ ಉಪದೇಶ/ಅಜೆಂಡಾ ಇರಬಹುದು ಅಂತ. ಆದರೆ ಈ “ಮಹಿಳಾ ಕರ್ನಾಟಕ ಸಮಾವೇಶ”ದಲ್ಲಿ ನಡೆದದ್ದು ಬೇರೆನೇ.  “ಸಹಿಷ್ಣುತೆ’ ಮತ್ತು “ಗೆಲುವು”ಗಳಿಗೆ ಈ ಸಮಾವೇಶ ಬೇರೆನೇ ಫೆಮಿನಿಸ್ಟ್ ಭಾಷ್ಯ ಬರೆಯಿತು. ಹೆಸರು ಮಾತ್ರವಲ್ಲ ಈ ಸಮಾವೇಶದ ಪರಿಕಲ್ಪನೆಯೇ ವಿಶಿಷ್ಟವಾಗಿತ್ತು. ಮಹಿಳಾ ಸಾಹಿತಿಗಳು, ಚಿಂತಕರು, ಹೋರಾಟಗಾರರು ಹಾಗೂ ಇದ್ಯಾವುದೂ ಅಲ್ಲದ ಸಾಮಾನ್ಯ ಮಹಿಳೆಯರನ್ನು ಒಂದು ಕಡೆಗೆ ತಂದು ಅರ್ಥಪೂರ್ಣ ಸಂವಾದ ಸಾಧ್ಯವಾಗಿಸಿದ್ದು ಬಹುಶಃ ಹಿಂದೆಂದೂ ನಡೆಯದ್ದು. ಆ ಅರ್ಥದಲ್ಲಿ ನಿಜವಾಗಿಯೂ ಚಾರಿತ್ರಿಕ.
          ಈ ವಿಶಿಷ್ಟ ಮಹಿಳಾ ಸಮಾವೇಶದ ಗೋಷ್ಟಿಗಳೂ, ಗೋಷ್ಟಿಗಳ ಹೆಸರುಗಳೂ, ಅಲ್ಲಿ ನಡೆದದ್ದೂ ಅಷ್ಟೇ ವಿಶಿಷ್ಟವಾಗಿದ್ದವು. “ನಮ್ಮ ಲೋಕ ನಮ್ಮ ಬದುಕು” ನಲ್ಲಿ ಮಹಿಳೆಯರ ಅನುಭವ ಲೋಕ ತೆರೆದುಕೊಂಡಿತು. “ನಮ್ಮ ಅರಿವು ನಮ್ಮ ನಡೆ” ಮಹಿಳಾ ಚಿಂತಕರ ಚಾವಡಿಯಾಯಿತು. “ನಮ್ಮ ಭಾವ ನಮ್ಮ ರಾಗ”ದಲ್ಲಿ ಮಹಿಳೆಯರ ಕಾವ್ಯ ಓದು ಗಾಯನ ಕೇಳಿ ಬಂತು. “ನಮ್ಮ ನೋಟ ನಮ್ಮ ನುಡಿ” ಮಹಿಳಾ ಸಾಹಿತ್ಯದ ಚರ್ಚಾ ವೇದಿಕೆಯಾಯಿತು. “ನಮ್ಮ ಮಾತು ನಮ್ಮ ಹಕ್ಕು” ಮಹಿಳಾ ಚಳುವಳಿಯ ಬಗೆಗಾಗಿತ್ತು. ಜಿ.ಎಸ್.ಎಸ್. ಅವರ “ಸ್ತ್ರೀ ಅಂದರೆ ಅಷ್ಟೇ ಸಾಕೆ?” ‘ಕಾವ್ಯರಂಗ’ ಎಂಬ ವಿಶಿಷ್ಟ ಕಲಾಭಿವ್ಯಕ್ತಿಯಲ್ಲಿ ಮೂಡಿ ಬಂತು. ಸಮಾವೇಶದ ಹರವು, ಆಳ ಎಷ್ಟಿತ್ತೆಂದರೆ ಅದನ್ನು ವರದಿ ಮಾಡುವುದು ಕಷ್ಟ. ಕೆಲವು ನೆನಪಿನಲ್ಲಿ ಉಳಿದು ಹೋಗುವ ಕೆಲವರ ಮಾತುಗಳಿಂದಷ್ಟೇ ಅದರ ಅಂದಾಜು ಮಾಡಬಹುದು. ಅಂತಹ ಕೆಲವು ಮಾತುಗಳನ್ನು ಗೋಷ್ಟಿಯಲ್ಲಿ ಕೊಡಲಾಗಿದೆ.


ಸಮಾವೇಶದ  ಆಶಯ ಮಾತುಗಳನ್ನಾಡಿದ ಡಾ.ವಿನಯಾ ಒಕ್ಕುಂದ, ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಿರದ ಪರಿಸ್ಥಿತಿ ಕುರಿತು ತಮ್ಮ ಅನುಭವಗಳನ್ನುಹಂಚಿಕೊಂಡರು. ರಾಘವೇಶ್ವರ ಸ್ವಾಮಿ ಅತ್ಯಾಚಾರ ಪ್ರಕರಣದ ಚರ್ಚೆ ಮತ್ತು ಪರಿಣಾಮ, ಬುರ್ಖಾ ಧರಿಸಿ ಬರುವ ವಿದ್ಯಾರ್ಥಿನಿಯರನ್ನು ವಿರೋಧಿಸಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹೊದ್ದು ಬರುತ್ತಿರುವ ಬೆಳವಣಿಗೆಗಳ ಕುರಿತು ಆತಂಕ ವ್ಯಕ್ತಪಡಿಸಿದರು.


ಉದ್ಘಾಟನಾ ಭಾಷಣ ಮಾಡಿದ ಹಿರಿಯ ಲೇಖಕಿ ಬಾನು ಮುಷ್ತಾಕ್ ಮಾತನಾಡಿ, “ಇಂದು ಭಿನ್ನ ಅಭಿಪ್ರಾಯ ಹೊಂದಿರುವುದೇ ದೊಡ್ಡ ಅಪರಾಧವೆಂದೂ ಅದಕ್ಕೆ ಹಣೆಗೆ ಗುಂಡಿಕ್ಕುವುದೇ ಶಿಕ್ಷೆ ಎಂದೂ ಬಹಿರಂಗ ಹೇಳಿಕೆ ನೀಡುವವರ ಮತ್ತು ಅದನ್ನು ಮಾಡಿ ತೋರಿಸುವವರ ನಡುವೆ ನಾವಿದ್ದೇವೆ. ಇಂಥವರ ಅಸಹಿಷ್ಣುತೆಗೆ ಸಹಿಷ್ಣುತೆಯೇ ಮದ್ದು. ಭಿನ್ನಾಭಿಪ್ರಾಯ ಮಾರಕವಲ್ಲ. ಭಿನ್ನತೆಯ ನಡುವೆಯೂ ಸಂವಾದ ಸಾಧ್ಯ ಅನ್ನುವುದನ್ನು ನೆಚ್ಚಿಕೊಂಡವರು ನಾವು. ಭಿನ್ನಾಭಿಪ್ರಾಯಗಳನ್ನು ಗೌರವಿಸುವ, ಟೀಕೆ - ವಿಮರ್ಶೆಗಳನ್ನು ಆರೋಗ್ಯದಿಂದ ಸ್ವೀಕರಿಸುವ ಮನೋಭಾವವನ್ನು ಈ ರೀತಿಯ ಕಾರ್ಯಕ್ರಮಗಳ ಮೂಲಕ ರೂಢಿಗೊಳಿಸಬೇಕು” ಎಂದರು.


ಅತಿಥಿಗಳಾಗಿದ್ದ ಡಾ. ವಸುಂಧರಾ ಭೂಪತಿ ಅವರು ಮಾತನಾಡಿದರು. “ಎಲ್ಲಿ ಸಹಭಾಗಿತ್ವ ಇದೆಯೋ ಅಲ್ಲಿ ಹೆಣ್ಣನ್ನು ಕೀಳಾಗಿ ನೋಡಲು ಸಾಧ್ಯವೇ ಇಲ್ಲ. ಹೆಣ್ಣನ್ನು ಅಡುಗೆಮನೆಗೆ ಸೀಮಿತವಾಗಿಸಿದ ನಂತರದಿಂದ ಭೇದಭಾವ ಶುರುವಾಯ್ತು. ಕ್ರಮೇಣ ಸಾಮಾಜಿಕ ಉತ್ಪಾದನಾ ಕ್ಷೇತ್ರದಿಂದ ಆಕೆಯನ್ನು ಹೊರಗಿಡಲಾಯ್ತು.” ಎಂದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಡಾ. ಬಂಜಗೆರೆ ಜಯಪ್ರಕಾಶ ಮಾತನಾಡಿದರು..  ಉದ್ಘಾಟನಾ ಸಮಾರಂಭದಲ್ಲಿ ಸಿದ್ದಿ ಡಮಾಮಿ ನೃತ್ಯ ಪ್ರದರ್ಶಿಸಲಾಯಿತು. ಉದ್ಘಾಟನಾ ಸಮಾರಂಭದ ನಿರ್ವಹಣೆಯನ್ನು ದೀಪಾ ಹಿರೇಗುತ್ತಿಯವರು ಮಾಡಿದರು.


            “ನಮ್ಮ ಲೋಕ ನಮ್ಮ ಬದುಕು”  ಗೋಷ್ಟಿಯಲ್ಲಿ ಕರ್ನಾಟಕ ಸಿಐಟಿಯು ಅಧ್ಯಕ್ಷರಾದ ಎಸ್.ವರಲಕ್ಷ್ಮಿ ಅವರು ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರ ಮತ್ತಿತರ ಮಹಿಳಾ ಕಾರ್ಮಿಕರ ಹಾಗೂ ದುಡಿಯುವ ಮಹಿಳೆಯರ  ಸಾಮಾನ್ಯವಾಗಿ ಬೆಳಕಿಗೆ ಬಾರದ ಅನುಭವ ಲೋಕವನ್ನು ಬಿಚ್ಚಿಟ್ಟರು. ಎಲ್ಲಾ ದುಡಿಯುವ ಮಹಿಳೆಯರ ಡಬ್ಬಲ್ ದುಡಿಮೆಗಳ ದೈನಂದಿನ ಬವಣೆಗಳ, ಮತ್ತು ತಮ್ಮ ಬದುಕು ಉತ್ತಮ ಪಡಿಸಿಕೊಳ್ಳಲು ಹಕ್ಕು ಸಾಧಿಸಲು ನಡೆಸಿದ ಹೋರಾಟಗಳ ಏಳು-ಬೀಳುಗಳ ಲೋಕವನ್ನು ಹಂಚಿಕೊಂಡರು. ಭಾರತಿ ಹೆಗಡೆ ಪತ್ರಕರ್ತರ ಮತ್ತು ಅವರ ಅನುಭವಕ್ಕೆ ಬರುವ ಮಹಿಳೆಯರ ಲೋಕವನ್ನು ತೆರೆದಿಟ್ಟರು. ಎಲ್ಲರೂ ತಾತ್ಸಾರದಿಂದ ಅನುಮಾನದಿಂದ ಕಾಣುವ ತೃತೀಯ ಲಿಂಗಿಗಳ  ಬದುಕಿನ ಬಗ್ಗೆ ಡಾ. ಅಕ್ಕೈ ಪದ್ಮಶಾಲಿ ಮಾತನಾಡಿದರು. ಜ್ಯೂಲಿಯಾನ ಫೆರ್ನಾಂಡೀಸ್ ಸಿದ್ದಿ ಜನಾಂಗದ ಮಹಿಳೆಯರ ಅನುಭವ ಲೋಕವನ್ನು ಪರಿಚಯಿಸಿದರು. ಕೆ. ಷರೀಫಾ ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು. ಚಾಂದನಿ ಮತ್ತು ರೇಣುಕಾ ಹೆಳವರ ಕವಿತೆ ಓದಿದರು.ಸುಧಾ ಆಡುಕಳ ಗೋಷ್ಟಿಯನ್ನು ನಿರ್ವಹಿಸಿದರು.

          “ನಮ್ಮ ಅರಿವು ನಮ್ಮ ನಡೆ” ಗೋಷ್ಟಿ ಮಹಿಳಾ ಚಿಂತನೆಗೆ ಮುಡಿಪಾಗಿತ್ತು. ಡಾ. ಎಚ್.ಎಸ್. ಅನುಪಮಾ ಮತ್ತು ಡಾ. ಗೀತಾ ವಸಂತ ಮಹಿಳಾ ಸಾಹಿತ್ಯ ಮತ್ತು ಚಳುವಳಿಗೆ ಮೂಲವಾದ ಇಂದಿನ ಮಹಿಳಾ ಚಿಂತನೆಯ ದಿಕ್ಕು ದೆಸೆಗಳ ಪರಿಚಯ ಮಾಡಿದರು. ಡಾ. ಎಂ.ಎಸ್.ಆಶಾದೇವಿ ಅಧ್ಯಕ್ಷತೆ ವಹಿಸಿದ್ದರು. ಗಿರಿಜಾ ಹೆಗಡೆ ಮತ್ತು ಮಾನಸಾ ಹೆಗಡೆ ಕವಿತೆ ಓದಿದರು. ಶ್ರೀದೇವಿ ಕೆರೆಮನೆ ಗೋಷ್ಟಿಯನ್ನು ನಿರ್ವಹಿಸಿದರು.
          “ನಮ್ಮ ನೋಟ ನಮ್ಮ ನುಡಿ” ಗೋಷ್ಟಿ ಮಹಿಳಾ ಸಾಹಿತ್ಯದ ಇಂದಿನ ಚರ್ಚೆಗಳನ್ನು ಎತ್ತಿಕೊಂಡಿತು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿ.ವಿ.ಯ ಡಾ. ಸುನಂದಮ್ಮ ಆರ್., ಹಾಗೂ ಡಾ. ಸಬಿತಾ ಬನ್ನಾಡಿ, ಡಾ. ತಾರಿಣಿ ಶುಭದಾಯಿನಿ ಮಹಿಳಾ ಸಾಹಿತ್ಯದ ಬಗ್ಗೆ ಇಂದಿನ ಒಳನೋಟಗಳನ್ನು ಕೊಟ್ಟರು. ಪ್ರಜ್ಞಾ ಮತ್ತಿಹಳ್ಳಿ ಮತ್ತು ರೇಣುಕಾ ರಮಾನಂದ ಕವಿತೆ ಓದಿದರು. ಕಾವ್ಯ ನಾಯ್ಕ ಗೋಷ್ಟಿಯ ನಿರ್ವಹಣೆ ಮಾಡಿದರು.
          “ನಮ್ಮ ಮಾತು ನಮ್ಮ ಹಕ್ಕು” ಗೋಷ್ಟಿಯಲ್ಲಿ ಮಹಿಳಾ ಚಳುವಳಿಯ ಇಂದಿನ ಸ್ಥಿತಿ, ಸೋಲು-ಗೆಲುವು, ಸವಾಲು-ಸಾಧ‍್ಯತೆಗಳನ್ನು ತೆರೆದಿಟ್ಟವರು ಜನವಾದಿ ಮಹಿಳಾ ಸಂಘಟನೆಯ ಕೆ. ನೀಲಾ ಮತ್ತು ಡಾ. ಅನುಸೂಯಾ ಕಾಂಬ್ಳೆ. ಡಾ. ಎನ್. ಗಾಯತ್ರಿ ಅಧ್ಯಕ್ಷತೆ ವಹಿಸಿದ್ದರು. ಅಕ್ಷತಾ ಹುಂಚನಕಟ್ಟೆ  ಮತ್ತು ಅಂಜಲಿ ಬೆಳೆಗಲಿ ಅವರು ಕವಿತೆ ಓದಿದರು.ಯಮುನಾ ಗಾಂವ್ಕರ್ ಗೋಷ್ಟಿಯನ್ನು ನಿರ್ವಹಿಸಿದರು.
ಈ ಗೋಷ್ಟಿಗಳಲ್ಲದೆ ಸಮಾವೇಶದಲ್ಲಿ ಮಹಿಳಾ ಕಾವ್ಯಧಾರೆ ಹರಿಯಿತು. ಕಾವ್ಯ ಓದು-ಗಾಯನಕ್ಕೆ ಮೀಸಲಾಗಿದ್ದ “ನಮ್ಮ ಭಾವ ನಮ್ಮ ರಾಗ” ಗೋಷ್ಟಿಯಲ್ಲಿ ಡಾ. ಹೇಮಾ ಪಟ್ಟಣಸೆಟ್ಟಿ, ಭಾಗೀರಥಿ ಹೆಗಡೆ, ಡಾ. ಮಾಧವಿ ಎಸ್. ಭಂಡಾರಿ, ಸುನಂದಾ ಕಡಮೆ,  ಸುಧಾ ಚಿದಾನಂದಗೌಡ, ಚೇತನಾ ತೀರ್ಥಹಳ್ಳಿ, ತಮ್ಮ ಕವನ ಗಳನ್ನು ಓದಿದರು. ಡಾ. ಸುಕನ್ಯಾ ಮಾರುತಿ ಅದ್ಯಕ್ಷತೆ ವಹಿಸಿದ್ದರು. ಜಾನಪದ ಹಾಡುಗಾರ್ತಿ ನುಗ್ಗಿ ಗೌಡ ಅತಿಥಿಗಳಾಗಿದ್ದರು. ಇದಲ್ಲದೆ ಹಲವು ಕವನಗಳ ಗಾನ ಸ್ಪಂದನ ನಡೆಯಿತು. ಡಾ. ಶ್ರೀಪಾದ ಭಟ್ ಅವರ ಸಂಗೀತ ಸಂಯೋಜನೆಯಲ್ಲಿ ವಿದ್ವಾನ ವಿಶ್ವನಾಥ ಹಿರೇಮಠ, ದೇವಾನಂದ ಗಾಂವ್ಕರ್ ಮುಂತಾದವರು ಗಾಯನ ಮಾಡಿದರು. ಈ ಗೋಷ್ಟಿಯ ನಿರ್ವಹಣೆಯನ್ನು ಸಿಂಧು ಹೆಗಡೆ ಮಾಡಿದರು. ಈ ಗೋಷ್ಠಿಯನ್ನು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉತ್ತರ ಕನ್ನಡ ಆಯೋಜಿಸಿತ್ತು. ಕಾವ್ಯಕ್ಕೆ ಮೀಸಲಾಗಿದ್ದ ಗೋಷ್ಟಿಯಲ್ಲದೆ, ಪ್ರತಿ ಗೋಷ್ಟಿಯಲ್ಲೂ ಎರಡು ಕವಿಗಳ ಕಾವ್ಯಸ್ಪಂದನ ಇದ್ದಿದ್ದು ಸಮಾವೇಶದ ಇನ್ನೊಂದು ವಿಶಿಷ್ಟತೆಯಾಗಿತ್ತು.
ಮಹಿಳಾ ವಿ.ವಿ. ಕುಲಪತಿ ಡಾ. ಸಬಿಹಾ ಭೂಮಿಗೌಡ ಅವರು ಸಮಾರೋಪ ಮಾತುಗಳನ್ನಾಡುತ್ತಾ “ನಮ್ಮ ಅನುಭವ ವಿಸ್ತಾರಗೊಳ್ಳಬೇಕು ಅಂದರೆ ನಮ್ಮ ಮಾತು ಮತ್ತು ಬದುಕುಗಳು ಒಂದಾಗಬೇಕು. ಆಗಷ್ಟೇ ನಮ್ಮ ಬರಹ ಸೂಕ್ಷ್ಮಗೊಳ್ಳಲು, ಮೊನಚು ಪಡೆಯಲು ಸಾಧ್ಯ… .. ಈ ಎರಡು ದಿನಗಳ ಕಾಲ ಭಿನ್ನ ವೇದಿಕೆ, ಭಿನ್ನ ವೇದನೆಗಳ ದನಿಯನ್ನು ಇಲ್ಲಿ ಆಲಿಸಿದ್ದೇವೆ. ಅದಕ್ಕೆ ತಕ್ಕಂತೆ ಸಹಿಷ್ಣು – ಅಸಹಿಷ್ಣುತೆಯ ಬದಲಾವಣೆಗಳನ್ನು, ಭವಿಷ್ಯದ ನಡೆಯನ್ನು ರೂಪಿಸಿಕೊಳ್ಳುವುದಕ್ಕೆ ಇಂಬುಕೊಟ್ಟಿದೆ” ಎಂದು ಕಿವಿಮಾತು ಹೇಳಿದರು. “ಇತ್ತೀಚಿನ ವರ್ಷಗಳಲ್ಲಿ ಎಡಪಂಥೀಯರು ಎಲ್ಲೆಗಳನ್ನು ದಾಟಿ ಹೊಸ ಗುಂಪುಗಳನ್ನು ಒಳಗೊಳ್ಳುತ್ತ, ಹೊಸತಲೆಮಾರನ್ನು ತಲುಪುವ ಕೆಲಸ ಮಾಡುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ವಿವಿಧ ಗುಂಪು – ಕ್ಷೇತ್ರಗಳ ಜೊತೆ ಸಂವಹನಕ್ಕೆ ಸಾಹಿತ್ಯ ಅತ್ಯಂತ ಪರಿಣಾಮಕಾರಿಯಾದ ಮಾಧ್ಯಮ. ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು” ಎಂದವರು ಹೇಳಿದರು. ಅತಿಥಿಗಳಾಗಿದ್ದ ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ ಮತ್ತು ಅಧ್ಯಕ್ಷತೆ ವಹಿಸಿದ್ದ ಬಂಜಗೆರೆ ಜಯಪ್ರಕಾಶ ಮಾತನಾಡಿದರು. ವಿಠ್ಠಲ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.









ಕಾರ್ಯಕ್ರಮದ ನಂತರ “ಬಹುಮುಖ” ಹುಣಸೂರು ಇವರು ಪ್ರಸ್ತುತ ಪಡಿಸಿದ :ಸ್ತ್ರೀ ಅಂದರೆ ಅಷ್ಟೇ ಸಾಕೇ?” ಎನ್ನುವ ಕಾವ್ಯ ರೂಪಕವನ್ನು ಸುಂದರವಾಗಿ ಪ್ರದರ್ಶಿಸಿದರು. ಸುಮಾರು 20 ಶಾಲಾ ವಿದ್ಯಾರ್ಥಿಗಳು ಚುರುಕಾಗಿ ಕನ್ನಡ ಸಾಹಿತ್ಯದ ಹಲವು ಭಾಗಗಳನ್ನು ಶಿಲ್ಪಾ ಎಸ್ ಅವರು ನಿರ್ದೇಶಿಸಿದರು. ಚಿಂತನ ರಂಗ ಅಧ್ಯಯನ ಕೇಂದ್ರ, ಉತ್ತರ ಕನ್ನಡ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉತ್ತರ ಕನ್ನಡ ಿದನ್ನು ಆಯೋಜಿಸಿತ್ತು.
ಸಹಿಷ್ಣುತೆಯ ನುಡಿಗಳು
ಉದ್ಘಾಟನಾ ಗೋಷ್ಟಿಯಲ್ಲಿ
”ಏಕಸಂಸ್ಕೃತಿಗಿಲ್ಲಿ ಭವಿಷ್ಯವಿಲ್ಲ, ಅದರಲ್ಲಿ ಬದುಕಿಲ್ಲ. ಆದ್ದರಿಂದ ಮುಂದಿನ ಜನಾಂಗವನ್ನು ಬಹುತ್ವದ ವಾರಸುದಾರರನ್ನಾಗಿ ರೂಪಿಸುವುದು ಇಂದಿನ ತುರ್ತು..“ಮಹಿಳೆಯ ಅಸ್ಮಿತೆಯನ್ನೇ ಅಸಹಿಷ್ಣುತೆಯಿಂದ ನೋಡುವ ವರ್ತಮಾನದ ಜೊತೆ ಸಂವಾದ ಸಾಧ್ಯವಾಗಬೇಕು”
- ಬಾನು ಮುಷ್ತಾಕ್ 
* “
* “ದೇವರು ಮನುಷ್ಯರ ನಡುವೆ ದ್ವೇಷ ಹುಟ್ಟಿಸುವ ಸಾಧನವಾಗಿದೆಯಾ? ಧರ್ಮ ಅಂದರೆ ಹಿಂದೂ, ಮುಸ್ಲಿಮ್, ಕ್ರೈಸ್ತ ಮೊದಲಾದ ಮತಗಳಲ್ಲ. ಧರ್ಮ ಅಂದರೆ ನ್ಯಾಯ, ಧರ್ಮ ಅಂದರೆ ಮಹೋನ್ನತಿ ಕಾಯಕವೇ ಧರ್ಮ. ಪ್ರೀತಿ ಎಲ್ಲಕ್ಕಿಂತ ದೊಡ್ಡ ಧರ್ಮ. ಈ ಧರ್ಮವನ್ನು ಎಲ್ಲರೂ ಪಾಲಿಸಬೇಕು. ವ್ಯಕ್ತಿಯೊಬ್ಬನನ್ನು ನೋಡಿದಾಗ ಆತನ ಲಾಂಛನವೇ ಕಣ್ಮುಂದೆ ಬರುವುದಾದರೆ, ಅಂಥವರು ಮನುಷ್ಯರೇ ಅಲ್ಲ.”
* “ಬೇಟೆಯಾಡುವುದನ್ನು ವಿಜೃಂಭಿಸುವ ಯಾವ ಸಮಾಜವೂ ಸುರಕ್ಷಿತವಲ್ಲ. ಮನುಷ್ಯ ಪ್ರಾಣಿಸ್ವರೂಪನಾಗಿದ್ದಾಗ ಬೇಟೆಯಾಡುತ್ತಿದ್ದ. ಬುದ್ಧ, ಕ್ರಿಸ್ತ ಮೊದಲಾದವರನ್ನು ಕಂಡನಂತರವೂ ಬೇಟೆಯಾಡುತ್ತಾರೆಂದರೆ ಅಂಥವರನ್ನು ಮನುಷ್ಯತ್ವದಿಂದ ಹೊರಗಿಡಬೇಕಾಗುತ್ತದೆ”
- ಡಾ. ಬಂಜಗೆರೆ ಜಯಪ್ರಕಾಶ್;
---------------------------------------
ಇಂದು ಸಾಂಸ್ಕೃತಿಕ ಅಶ್ಲೀಲತೆ ಮೂಲಕ ಭಯೋತ್ಪಾದನೆ ಸೃಷ್ಟಿಸಲಾಗ್ತಿದೆ. ಅದನ್ನು ಎದುರಿಸುವ ನಿಟ್ಟಿನಲ್ಲಿ ಬೃಹತ್ ಚಳವಳಿ ರೂಪಿಸಬೇಕಾದ ಅಗತ್ಯವಿದೆ. ….ರಾಘವೇಶ್ವರ ಸ್ವಾಮಿ ಅತ್ಯಾಚಾರ ಪ್ರಕರಣದ ವಿರುದ್ಧ ರಾಜ್ಯದ ಮಹಿಳೆಯರು ಒಗ್ಗೂಡಿ ಪ್ರತಿಭಟಿಸದೆ ಹೋದದ್ದು ವಿಷಾದನೀಯ””
- ಡಾ.ವಸುಂಧರಾ ಭೂಪತಿ
ಸಮಾರೋಪದಲ್ಲಿ
-
 “ಸಹಿಷ್ಣುತೆ ಎಂಬುದು ಗೆಲುವು” ಎಂದು ಹೇಳುತ್ತಿರುವುದು ಅಸಹಿಷ್ಣುತೆಯನ್ನು ಗರಿಷ್ಠ ಪ್ರಮಾಣದಲ್ಲಿ ಹೊಂದಿರುವ ಮಹಿಳೆಯರಿಗಲ್ಲ, ಒಟ್ಟು ಸಮಾಜಕ್ಕೆ. ನಾವು ಮಹಿಳೆಯರು ಎಷ್ಟೋ ಸಲ ಸಹಿಷ್ಣುತೆಯನ್ನು ಅನಿವಾರ್ಉ ಎಂಬಂತೆ ಪಾಲಿಸಿಕೊಂಡು ಬಂದಿದ್ದೀವಿ. ಹಾಗೆ ಭಾವಿಸಿದ್ದರಿಂದಲೇ ಅದು ನಮಗೆ ಅಸಹಾಯಕತೆಯಂತೆ ಅನ್ನಿಸಿದೆ. ಆದರೆ ವಾಸ್ತವದಲ್ಲಿ ಸಹಿಷ್ಣುತೆಯ ಒಳಗೆ ಗೆಲುವಿನ ಆಶಾಕಿರಣವಿದೆ.. .. ..ಸಹಿಷ್ಣುತೆಯನ್ನು ಮೌಲ್ಯ ಎನ್ನುವುದಾದರೆ ಅದು ಗಂಡು ಹೆಣ್ಣುಗಳಿಬ್ಬರಿಗೂ ಮೌಲ್ಯವಾಗಬೇಕು. ಇಲ್ಲವಾದರೆ ಅದು ದೌರ್ಬಲ್ಯವಾಗಿಬಿಡುತ್ತದೆ. ಆ ಎಚ್ಚರ ಇರಬೇಕು”
- ಸಬಿಹಾ ಭೂಮಿಗೌಡ
----------------------------------
“ಸಮಾನತೆ ಅನ್ನುವುದು ಸಾಧನೆಯ ಸ್ಥಿತಿ ತಲುಪಿದಾಗ ಸಹಿಷ್ಣುತೆಯು ಗೆಲುವಾಗುತ್ತದೆ. ಅದನ್ನು ಸಾಧಿಸುವ ನಿಟ್ಟಿನಲ್ಲಿ ಸೇರುವ, ಕವಲೊಡೆಯುವ, ಮತ್ತೆ ಸೇರುವ, ಕೊನೆಗೊಮ್ಮೆ ಸಾಧನೆಯ ಸಾಗರ ಸೇರುವ ಪ್ರಕ್ರಿಯೆಯೇ ಸಹಿಷ್ಣುತೆಯನ್ನು ಸಾಧ್ಯವಾಗಿಸುತ್ತೆ”
- ಕೆ.ಎಸ್.ವಿಮಲಾ
-----------------------------------------------------

ಗೋಷ್ಟಿಗಳಲ್ಲಿ ಸಹಿಷ್ಣುತೆಯ ನುಡಿಗಳು
ಈವರೆಗೆ ನನಗೆ ಸಿಕ್ಕಿರೋ ಪ್ರಶಸ್ತಿಗಳು ಜೈಲುವಾಸ, ಗೋಲಿಬಾರ್, ವಿಚಾರಣೆ ಇವೇ ಎಲ್ಲ. ಈ ಬಗ್ಗೆ ನನಗೆ ದುಃಖವಿಲ್ಲ, ಬದಲಿಗೆ ಹೆಮ್ಮೆ ಇದೆ. ಈ ಎಲ್ಲ ಪ್ರಶಸ್ತಿಗಳು ಸಿಕ್ಕಿರೋದು ನನ್ನ ಹೋರಾಟಕ್ಕೆ.
~ ವರಲಕ್ಷ್ಮಿ, ಸಿಐಟಿಯು ರಾಜ್ಯಾಧ್ಯಕ್ಷೆ
------------------------------
ಸ್ತ್ರೀಲಿಂಗ, ಪುಲ್ಲಿಂಗ ಎರಡೂ ಅಲ್ಲದವರು ನಪುಂಸಕಲಿಂಗ ಹೇಗಾಗ್ತಾರೆ? ಮೇಜು, ಕುರ್ಚಿ ಇತ್ಯಾದಿಗಳು ನಪುಂಸಕ - ಅವು ಲಿಂಗವಿಲ್ಲದವು. ನಾವು ಮನುಷ್ಯರು. ಶಿಶ್ನ ಇದ್ದೋನೇ ಗಂಡು. ಯೋನಿ ಇದ್ದೋಳೇ ಹೆಣ್ಣು ಅಂತ ತೀರ್ಮಾನ ಮಾಡಿದವರು ಯಾರು?  ಯೋನಿಯಿಲ್ಲದ, ಗರ್ಭವಿಲ್ಲದ, ಮೊಲೆಯಿಲ್ಲದ ಹೆಣ್ಣುಗಳು ನಾವು.
~ ಅಕ್ಕೈ ಪದ್ಮಶಾಲಿ
ಒಬ್ಬರನ್ನೊಬ್ಬರು ದ್ವೇಷಿಸುವ ಮೂಲಕ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ.
~ ಕೆ.ಷರೀಫಾ
• ಬಾಂಬ್’ಗಳನ್ನು ತಯಾರಿಸುವುದೇ ದೇಶಭಕ್ತಿ ಎನ್ನುವಂತಾಗಿದೆ.    
• ಲಿಂಗ, ಜಾತಿ, ಧರ್ಮಗಳ ಮಾರುಕಟ್ಟೆಯಿಂದ ಅಸಹಿಷ್ಣುತೆ ಹೆಚ್ಚುತ್ತಿದೆ.     
• ಸ್ತ್ರೀವಾದ ಅಂದ್ರೆ ಪುರುಷವಿರೋಧ ಅಲ್ಲ. ಪುರುಷರಂತೆ ಆಗುವುದು ಕೂಡಾ ಅಲ್ಲ.
~ ಡಾ.ಎಚ್.ಎಸ್. ಅನುಪಮಾ
• ವ್ಯವಸ್ಥೆಯೊಳಗಿನ ಕೇಡುಗಳ ವಿರುದ್ಧ ಹೋಗಬೇಕಾದಾಗ ಹೆಣ್ಣು ಕೇಡನ್ನು ನಿರಾಕರಿಸ್ತಾಳೆ ಹೊರತು ವ್ಯವಸ್ಥೆಯನ್ನಲ್ಲ. ಹೆಣ್ಣು ವ್ಯವಸ್ಥೆಯ ಕ್ರೌರ್ಯಗಳನ್ನ ವಿರೋಧಿಸ್ತಾಳೆ ಹೊರತು ವ್ಯಕ್ತಿಯನ್ನಲ್ಲ. ಇದನ್ನು ಹೆಣ್ಣು ಖಚಿತ ನೆಲೆಯಲ್ಲಿ ಮಾಡುತ್ತ ಬಂದಿದ್ದಾಳೆ. ಆದರೆ ಅವಳ ಈ ದನಿಯನ್ನ ಅರ್ಥ ಮಾಡಿಕೊಳ್ಳೋದಕ್ಕೆ ಶತಮಾನಗಳು ಬೇಕಾಯ್ತು. ಹಾಗಿದ್ದೂ ಇನ್ನೂ ಕೆಲವರಿಗದು ಅರ್ಥವಾಗಿಲ್ಲ.
• ಗಂಡಸಿನ ಒಣಪ್ರತಿಷ್ಠೆಯನ್ನ ಮೌಲ್ಯ’ ಎಂಬಂತೆ ಬಿಂಬಿಸಿದರೆ, ಮುಂದೊಂದು ದಿನ ಹೆಣ್ಣು ಅದನ್ನು ಮೌಲ್ಯ ಅಂದುಕೊಂಡೇ ತನ್ನದಾಗಿಸಿಕೊಳ್ಳಬಹುದು. ಹಾಗೇನಾದರೂ ಆದರೆ, ಆ ದಿನ ಎಲ್ಲರೂ ‘ಅಸಹಿಷ್ಣುತೆಯ ಸೋಲು’ ಎದುರಿಸಬೇಕಾಗುತ್ತದೆ.
~ ಸಬಿತಾ ಬನ್ನಾಡಿ
------------------------------------
• ಇಂದಿನ ಸ್ತ್ರೀವಾದಿ ನೆಲೆ ಅತ್ಯಂತ ಮಾನವೀಯ ದೃಷ್ಟಿಯೊಳಗೆ ತನ್ನನ್ನು ತಾನು ಪ್ರಕಟಗೊಳಿಸ್ಕೊಳ್ಳೋದಕ್ಕೆ ಆರಂಭಿಸಿದೆ.
• ಗಾಂಧಿ ವಸಾಹತುಷಾಹಿಯನ್ನು ಎದುರಿಸಿದ್ದು ಸ್ತ್ರೀಪರಿಭಾಷೆಯ ನೆಲೆಯಲ್ಲಿ. ಉಪ್ಪು ಮಾಡಿದ್ದು, ಕಸಬರಿಕೆ ಹಿಡಿದು ಸ್ವಚ್ಛತೆಗೆ ಮುಂದಾಗಿದ್ದು ಇವೇ ಮೊದಲಾದ ಸ್ತ್ರೀ ಪರಿಕರಗಳ ಮೂಲಕ ಸಾಮ್ರಾಜ್ಯಷಾಹಿಯನ್ನೆ ಗಾಂಧೀಜಿ ಅಲುಗಾಡಿಸಿದರು.
• ಕ್ರಿಕೆಟ್ ಮ್ಯಾಚ್’ಗೆ ಕಾಯುವಂತೆ ಯುದ್ಧಕ್ಕೆ ಕಾದು ಕೂತಿರುವವರು ನಮ್ಮಲ್ಲಿ ಇದ್ದಾರೆ. ಆದರೆ ಒಬ್ಬೇ ಒಬ್ಬ ಮಹಿಳೆ ಇಂಥ ಯುದ್ಧದ ಹಿಂಸೆಯನ್ನು ಬಯಸಲು ಸಾಧ್ಯವಿಲ್ಲ.
~ ತಾರಿಣಿ ಶುಭದಾಯಿನಿ
-----------------------------------------
ಗೋವಿನ ಹಾಡಿನ ಅನೇಕ ಪಠ್ಯಗಳಿವೆ. ಅವುಗಳಲ್ಲಿ ಇಂದು ಹೆಚ್ಚಾಗಿ ಬಳಸೋದು ಕೃಷ್ಣಭಟ್ಟರ ಪಠ್ಯ. ನಾನು ಇನ್ನೊಂದು ಪಠ್ಯ ಕೇಳಿದ್ದೇನೆ. ಸೋಲಿಗರ ಮಹಿಳೆಯರು ಹಾಡುತ್ತಾರೆ ಇದನ್ನು.
ಈ ಹಾಡಿನಲ್ಲಿ ಹುಲಿ ‘ಕ್ರೂರವ್ಯಾಘ್ರ’ನಲ್ಲ. ಆದರೆ ಗೋವಿನ ಮಮತೆಗೆ ಮರುಗಿ ಪ್ರಾಣ ತೊರೆಯುತ್ತದೆ. ಆದರೆ ನಂತರದಲ್ಲಿ ಸೋಲಿಗರ ಹಾಡು ಮತ್ತೊಂದು ಬಗೆಯಲ್ಲಿ ಸಾಗುತ್ತದೆ. ಹಸು ತನ್ನ ಕರುವಿಗೆ ಹಾಲು ಕುಡಿಸಲು ಹೋದಾಗ ಅದು ಹುಲಿಯ ಮರಿ ಜೊತೆ ಆಟವಾಡ್ತಿರುತ್ತದೆ. ಅಮ್ಮ ಕರೆದಾಗ ಕರು, ‘ಗೆಳೆಯನ ತಾಯಿ ಹುಲಿಯೂ ಬರಲಿ’ ಅನ್ನುತ್ತದೆ. ಎಷ್ಟು ಹೊತ್ತಾದರೂ ಅಮ್ಮ ಹುಲಿ ಬರೋದಿಲ್ಲ. (ಅದು ಅದೇ ಪ್ರಾಣತೊರೆದ ಹುಲಿ).
ಇದರಿಂದ ದುಃಖಗೊಳ್ಳುವ ಕರು, ತನ್ನ ತಾಯಿಗೆ ನಿನ್ನ ದೆಸೆಯಿಂದ ಸತ್ತುಹೋಗಿದ್ದು ನನ್ನ ಗೆಳೆಯನ ತಾಯಿ ಎಂದು ಮುನಿಯುತ್ತದೆ. ಕೋಪದಿಂದ ಕೆಚ್ಚಲು ಕಚ್ಚುತ್ತದೆ.
ನಮಗೆ ಬೇಕಿರೋದು ಅಸಹಿಷ್ಣುತೆಯನ್ನು ಪ್ರಚೋದಿಸುವ ಕೃಷ್ಣಭಟ್ಟರ ಪಠ್ಯವಲ್ಲ. ಬೆಸುಗೆಯ ಸೋಲಿಗರ ಪಠ್ಯ.
~ ಡಾ.ಸುನಂದಮ್ಮ ಆರ್.
-----------------------------------------
• ಸಮಾನತೆ ಮನುಷ್ಯ – ಮನುಷ್ಯರ ನಡುವೆ ಮಾತ್ರವಲ್ಲ, ಗಂಡು - ಹೆಣ್ಣಿನ ನಡುವೆಯೂ ಇರಬೇಕು. ಇದು ಸಾಧ್ಯವಾಗಬೇಕೆಂದರೆ ಕಾರುಣ್ಯ ಇರಬೇಕಾಗುತ್ತದೆ. ಬುದ್ಧ – ಬಸವರಲ್ಲಿದ್ದಂಥಹ ಕಾರುಣ್ಯ.
• ಮಹಿಳೆಯನ್ನು ಸದಾ ಪರಾವಲಂಬಿಯಾಗಿರಿಸಲು ಮನುವಾದ ಯತ್ನಿಸುತ್ತಿದೆ. ಪರಾವಲಂಬಿ ಜೀವಿಯ ಮಾತುಗಳು ಹಕ್ಕಾಗುವುದು ಹೇಗೆ?
~ ಡಾ.ಅನಸೂಯಾ ಕಾಂಬ್ಳೆ @ #ಸಹಿಷ್ಣುತೆಎಂಬುದುಗೆಲುವು : ನಮ್ಮ ಮಾತು ನಮ್ಮ ಹಕ್ಕು
---------------------------------------
• ಇಂದು ಮಹಿಳಾ ಚಳವಳಿಯೂ ಸೇರಿದಂತೆ ಚಳವಳಿಗಳೇ ಇಲ್ಲ ಅಂತ ಮತ್ತೆ ಮತ್ತೆ ಹೇಳುವ ಮೂಲಕ ಚಳವಳಿಗಳನ್ನೇ ಇಲ್ಲವಾಗಿಸುವ ಕುತಂತ್ರ ನಡೆಯುತ್ತಿದೆ. ಇದು ಅಮೆರಿಕಾ ಹುಟ್ಟುಹಾಕಿದ ಕುತಂತ್ರ. ಆ ಸುಳ್ಳನ್ನು ಹೇಳುವ ಮೂಲಕ ಅದು ಖಾಲಿತನದ ಭ್ರಮೆಯನ್ನೂ ಚಳವಳಿಯೊಳಗೆ ಬಿಕ್ಕಟ್ಟನ್ನೂ ಹುಟ್ಟುಹಾಕುತ್ತಿದೆ.
• ಹೆಣ್ಣೊಳಗಿನ ತಾಯ್ತನ, ಜೀವ ಕಾರುಣ್ಯ ಜಾಗತಿಕ ಮಟ್ಟದ ದೊಡ್ಡ ಶಕ್ತಿಯಾಗಿ ನಮ್ಮೆದುರು ನಿಂತಿದೆ. ಪರಿವರ್ತನೆ ಉಂಟುಮಾಡುವ ನಿಟ್ಟಿನಲ್ಲಿ ಮಹಿಳೆ ವೈಯಕ್ತಿಕ ತಾಯ್ತನದಿಂದ ಜಾಗತಿಕ ತಾಯ್ತನದತ್ತ ಮುನ್ನಡೆಯಬೇಕಾಗುತ್ತದೆ. “ಕೇಸರಿ, ಅತಿರೇಕದ ಹಸಿರುಗಳಿಗೆ ಒಳಗಾಗಲು ನಮ್ಮ ಮನೆಯ ಗಂಡಸರನ್ನ ಬಿಡಲ್ಲ” ಅಂತ ನಮ್ಮ ಹೆಣ್ಣುಮಕ್ಕಳು ಪಣ ತೊಟ್ಟರೆ ಖಂಡಿತ ಬದಲಾವಣೆ ಸಾಧ್ಯ.
-  ಕೆ. ನೀಲಾ
----------------------------------------
ಸಿನೆಮಾಗಳಲ್ಲಿ ಧೂಮಪಾನ, ಮದ್ಯಪಾನದ ಸನ್ನಿವೇಶಗಳಲ್ಲಿ 'ಶಾಸನ ವಿಧಿಸಿದ ಎಚ್ಚರಿಕೆ' ನೋಟ್ ಹಾಕಲಾಗುತ್ತೆ. ರೇಪ್, ಈವ್ ಟೀಸ್ ಸನ್ನಿವೇಶಗಳಲ್ಲಿ ಯಾಕಿಲ್ಲ? ಅಂಥ ಸನ್ನಿವೇಶಗಳಲ್ಲೂ ಎಚ್ಚರಿಕೆ ನೋಟ್ ಹಾಕಲು ಆರಂಭಿಸಬೇಕು.
~ ಭಾರತಿ ಹೆಗಡೆ

---------------------------------------------------