Monday 6 April 2015

ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನುಒತ್ತಾಯಿಸುವ-ಧಾರವಾಡ ಘೋಷಣೆ





ಧಾರವಾಡಘೋಷಣೆ
ಧಾರವಾಡದ ಕನರ್ಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ 2015ನೇ ಇಸವಿಯ ಏಪ್ರಿಲ್ ತಿಂಗಳಿನ 4 ಮತ್ತು 5 ದಿನಗಳಂದು, ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನುಒತ್ತಾಯಿಸುವುದಕ್ಕಾಗಿ ಏರ್ಪಟ್ಟಿರುವ ರಾಷ್ಟ್ರೀಯಚಿಂತನ ಸಮಾವೇಶದಲ್ಲಿ ಕೂಡಿರುವ ಲೇಖಕರು, ಶಿಕ್ಷಣತಜ್ಞರು, ನ್ಯಾಯವಾದಿಗಳು, ನಿವೃತ್ತ ನ್ಯಾಯಾಧೀಶರು, ಶಾಸಕರು, ಶಿಕ್ಷಕರು, ವಿದ್ಯಾಥರ್ಿಗಳು, ಪೋಷಕರು, ಶಿಕ್ಷಕರ ಸಂಘ ಹಾಗೂ ಜನಪರ ಸಂಘಟನೆಗಳಿಗೆ ಸೇರಿದ ನಾವು, ಈ ಮೂಲಕ ಘೋಷಿಸುವುದೇನೆಂದರೆ-
1. ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣವನ್ನು ಕೊಡುವ ಹಾಗೂ 1ನೇ ತರಗತಿಯಿಂದ 10ನೇ ತರಗತಿಯವರೆಗೆರಾಜ್ಯಭಾಷೆಯಾದಕನ್ನಡವನ್ನುಕಡ್ಡಾಯವಾಗಿ ಕಲಿಸುವ ಬಗ್ಗೆ ಕನರ್ಾಟಕ ಸಕರ್ಾರವುವಿಧೇಯಕಗಳನ್ನು ಪಾಸುಮಾಡಿದೆ. ಇದನ್ನುಅಭಿನಂದಿಸುತ್ತೇವೆ.
2. ಭಾರತವನ್ನು ವಸಾಹತುಶಾಹಿ ಆಡಳಿತಗಾರರು ಬಿಟ್ಟುಹೋಗಿ ಏಳು ದಶಕಗಳು ತುಂಬುತ್ತ ಬಂದವು.ಆದರೂ ಈ ಹೊತ್ತಿಗೂಭಾರತಕ್ಕೆಸಮಗ್ರವಾದ ಮತ್ತು ವೈಜ್ಞಾನಿಕವಾದ ಭಾಷಾನೀತಿ ಮತ್ತು ಭಾಷಾಯೋಜನೆಯೊಂದುಇಲ್ಲ. ನಮ್ಮರಾಜ್ಯ ಸಕರ್ಾರಕ್ಕೂತನ್ನದೇಆದ ಭಾಷಾನೀತಿ ಮತ್ತು ಶಿಕ್ಷಣನೀತಿ ಇರುವುದಿಲ್ಲ.ಇದು ನ್ಯಾಯಾಲಯಗಳು ಬಲಿಷ್ಠವರ್ಗಗಳ ಪರವಾಗಿ ಭಿನ್ನಭಿನ್ನವಾದ ತೀಪರ್ುಗಳನ್ನು ಕೊಡುವುದಕ್ಕೆಒಂದುಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಕರ್ಾರಗಳು ಈಗಲಾದರೂ-
ಅ. ಜನಭಾಷೆಗಳ ಪರವಾದ ಭಾಷಾನೀತಿ ಮತ್ತು ಶಿಕ್ಷಣನೀತಿಯನ್ನು ರೂಪಿಸಿ ಜಾರಿಗೆತರಬೇಕು.
ಆ. ಪ್ರಾಥಮಿಕ ಶಿಕ್ಷಣವನ್ನು ಸಕರ್ಾರವೇ ವಹಿಸಿಕೊಳ್ಳಬೇಕು.
ಇ. ಸಮಾನ (ಕಾಮನ್) ಮತ್ತು ಸಮೀಪ (ನೈಬರ್ಹುಡ್) ಶಾಲೆಯತತ್ವದಆಧಾರದ ಮೇಲೆ, ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣ ಕೊಡುವ ವ್ಯವಸ್ಥೆ ಮಾಡಬೇಕು.ಇದಕ್ಕೆ ಪೂರಕವಾಗಿಸಂವಿಧಾನದ 21ನೇ ಅನುಚ್ಛೇದಕ್ಕೆ ಭಾರತದ ಸಂಸತ್ತು ಸೂಕ್ತವಾಗಿ ತಿದ್ದುಪಡಿಯನ್ನುತರಬೇಕು.
ಈ. ಪ್ರತಿಯೊಂದು ಸಕರ್ಾರಿ ಶಾಲೆಯನ್ನುಕೇಂದ್ರೀಯ ವಿದ್ಯಾಲಯಗಳ ದಜರ್ೆಗೆಏರಿಸಬೇಕು.
3. `ಹುಟ್ಟಿನಿಂದ 18 ವರ್ಷದಎಲ್ಲಾ ಮಕ್ಕಳಿಗೆ ಸೂಕ್ತವಾದಆರೈಕೆ, ರಕ್ಷಣೆ, ಮತ್ತು ಶಿಕ್ಷಣವನ್ನು ಒದಗಿಸುವುದು ಸಕರ್ಾರದ ಹೊಣೆಯಾಗಿದೆ' ಎಂಬ ಒಕ್ಕಣಿಕೆಯಿರುವಮಕ್ಕಳ ಹಕ್ಕುಗಳನ್ನು ಕುರಿತ ವಿಶ್ವಸಂಸ್ಥೆಯಒಡಂಬಡಿಕೆಗೆ ಭಾರತವೂ ಸಹಿ ಹಾಕಿದೆ. ಈ ಸಕರ್ಾರವುಹಿನ್ನೆಲೆಯಲ್ಲಿ ಮಾತೃಭಾಷೆಯಲ್ಲಿ ಮಕ್ಕಳಿಗೆ ಅಗತ್ಯವಾದ ಕಾನೂನುಗಳನ್ನು ರೂಪಿಸಬೇಕು.
4. ಸಕರ್ಾರವುಎಲ್ಲಾ ಶಾಲೆಗಳಲ್ಲಿಯೂ ಇಂಗ್ಲೀಷನ್ನು ಪ್ರಾಥಮಿಕ ಹಂತದಿಂದಲೇಒಂದು ಭಾಷೆಯಾಗಿ ಸಮರ್ಥವಾಗಿ ವೈಜ್ಞಾನಿಕವಾಗಿ ಕಲಿಸಲು
ತಕ್ಕವ್ಯವಸ್ಥೆಯನ್ನುರೂಪಿಸಬೇಕು;ಇದಕ್ಕೆ ಪೂರಕವಾಗಿ ಸಮರ್ಥವಾದಇಂಗ್ಲೀಷನ್ನು ಕಲಿಸಲು ಶಿಕ್ಷಕರಿಗೆ ತರಬೇತಿಕೊಡುವ ವ್ಯವಸ್ಥೆಯನ್ನು ಪ್ರತಿಜಿಲ್ಲಾ ಕೇಂದ್ರಗಳಲ್ಲಿರುವ ಶಿಕ್ಷಕರ ತರಬೇತಿ ಸಂಸ್ಥೆಗಳ ಮೂಲಕ ಮಾಡಬೇಕು.
5. ಮಾತೃಭಾಷೆಯನ್ನು ಪ್ರಾಥಮಿಕ ಹಂತದಲ್ಲಿ ಸಮರ್ಥವಾಗಿಕಲಿತ ಮಕ್ಕಳು ಇಂಗ್ಲೀಷನ್ನುಅಥವಾ ಮಾತೃಭಾಷೆಯಲ್ಲದಯಾವುದೇಎರಡನೇ ಭಾಷೆಯನ್ನು ಸಮರ್ಥವಾಗಿಕಲಿಯಬಲ್ಲರು. ಈ ಶೈಕ್ಷಣಿಕ ಸತ್ಯವನ್ನು ವಿಶ್ವಸಂಸ್ಥೆಯ ಅಧ್ಯಯನಗಳು ಹಾಗೂ ಶಿಕ್ಷಣತಜ್ಞರ ಪ್ರಯೋಗಗಳು ದೃಢಪಡಿಸಿವೆ. ಈ ಹಿನ್ನೆಲೆಯಲ್ಲಿಪ್ರಾಥಮಿಕ ಹಂತದಲ್ಲಿ ಮಕ್ಕಳ ಮಾತೃಭಾಷೆಗಳನ್ನು ಈಗಿರುವುದಕ್ಕಿಂತ ಸಮರ್ಥವಾಗಿ ಕಲಿಸುವ ವ್ಯವಸ್ಥೆ ಮಾಡಬೇಕು.
6. ಶಿಕ್ಷಣದ ಉನ್ನತ ಹಂತದಲ್ಲಿ ವಿಜ್ಞಾನ, ಮಾನವಿಕ ಹಾಗೂ ಸಮಾಜ ವಿಜ್ಞಾನಗಳನ್ನು ತಾಯ್ನುಡಿಗಳಲ್ಲಿ ಕಲಿಸುವುದಕ್ಕೆ ಬೇಕಾದ ಪಠ್ಯಪುಸ್ತಕ ಮತ್ತು ಆಕರಗ್ರಂಥಗಳನ್ನು ನಿಮರ್ಿಸುವ ವ್ಯವಸ್ಥೆ ಆಗಬೇಕು.
7. ಸಕರ್ಾರಿ ಶಾಲೆಗಳನ್ನು ಉತ್ತಮಪಡಿಸಲು ಸಮುದಾಯಗಳ ಭಾಗವಹಿಸುವಿಕೆ ಸ್ವಾಗತಾರ್ಹ.ಆದರೆ ಸಕರ್ಾರಿ ಶಾಲೆಗಳನ್ನು ಸಾರ್ವಜನಿಕ ಸಹಭಾಗಿತ್ವದ (ಪಿಪಿಪಿ) ಅಡಿಯಲ್ಲಿಎನ್.ಜಿ.ಓ, ಕಾಪರ್ೋರೇಟ್ ಸಂಸ್ಥೆ ಹಾಗೂ ಧಾಮರ್ಿಕ ಸಂಸ್ಥೆಗಳಿಗೆ ವಹಿಸಿಕೊಡಬಾರದು.ಶಿಕ್ಷಣನೀತಿ ಮತ್ತುಯೋಜನೆಯನ್ನುರೂಪಿಸಲು ಮತ್ತುಜಾರಿಮಾಡಲು ಶಿಕ್ಷಣತಜ್ಞರ ತಜ್ಞತೆಯನ್ನು ಸರಕಾರ ಸೂಕ್ತವಾಗಿ ಬಳಸಿಕೊಳ್ಳಬೇಕು.ಆದರೆ ಈ ಕೆಲಸವನ್ನು ಎನ್.ಜಿ.ಒಗಳಿಗಾಗಲಿ, ಕಾಪರ್ೋರೇಟ್ ಸಂಸ್ಥೆಗಳಿಗಾಗಲಿ ವಹಿಸಕೂಡದು.
8. ಖಾಸಗಿ ಶಿಕ್ಷಣ ಸಂಸ್ಥೆಗಳು ಸಂವಿಧಾನದ 19(ಜಿ) ಕಾಲಮಿನ ದುರುಪಯೋಗ ಮಾಡಿಕೊಂಡು ಶಿಕ್ಷಣವನ್ನು ಒಂದುಉದ್ದಿಮೆಯನ್ನಾಗಿ ಮಾಡಿಕೊಂಡು ಪೋಷಕರನ್ನು ಸುಲಿಗೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿಶಿಕ್ಷಣ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಲು ಸಕರ್ಾರವು ಸೂಕ್ತವಾದ ಕಾನೂನುಗಳನ್ನು ರೂಪಿಸಬೇಕು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುತ್ತೇವೆಂದು ಸರಕಾರದಿಂದ ಪರವಾನಗಿ ಪಡೆದುಇಂಗ್ಲೀಷ್ ಶಿಕ್ಷಣ ಕೊಡುವ ಮೂಲಕ ಜನತೆಗೆ ಸುಳ್ಳು ಹೇಳಿ ವಂಚನೆ ಮಾಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಬೇಕು.
9. ನವ ಉದಾರೀಕರಣದಪ್ರಸ್ತುತ ಸನ್ನಿವೇಶದಲ್ಲಿ,ಶಿಕ್ಷಣವನ್ನು ಸರಕನ್ನಾಗಿಪರಿವತರ್ಿಸಿ ಉಳ್ಳವರಿಗೆ ಮಾರಾಟ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ನ್ಯಾಯಾಲಯಗಳು ತೀಪರ್ುಕೊಡುತ್ತಿವೆ. ನಮ್ಮದೇಶದ ಪ್ರಜಾಪ್ರಭುತ್ವ, ಶಿಕ್ಷಣ ಮತ್ತು ಜನಭಾಷೆಗಳ ಮೇಲೆ ನಡೆಯುತ್ತಿರುವಆಕ್ರಮಣವನ್ನುತಡೆಗಟ್ಟುವ ನಿಟ್ಟಿನಲ್ಲಿ, ಪ್ರಜಾತಂತ್ರ ಮತ್ತು ಸಂವಿಧಾನದ ಆಶಯಗಳನ್ನು ಸೂಕ್ತವಾಗಿ ನಿರ್ವಚಿಸುವಲ್ಲಿ ಅವು ಸಂಪೂರ್ಣವಾಗಿ ವಿಫಲವಾಗಿವೆ. ಇದರ ಬಗ್ಗೆ ಸಮಾವೇಶವುತನ್ನಆತಂಕವನ್ನುದಾಖಲಿಸುತ್ತದೆ.
10. ಮಾತೃಭಾಷಾ ಮಾಧ್ಯಮದ ಪರವಾದ ಈ ಚಳುವಳಿಯು, ಈಗಿರುವ ಸೀಮಿತ ನೆಲೆಯಿಂದ ಹೊರಬಂದು, ನೇಕಾರರ, ರೈತರ,ಮಹಿಳೆಯರ, ದಲಿತರ, ವಿದ್ಯಾಥರ್ಿಗಳ ಹಾಗೂ ಶಿಕ್ಷಕರ ಚಳುವಳಿಗಳನ್ನೂ ಒಳಗೊಂಡು ವಿಶಾಲಗೊಳ್ಳ್ಳಬೇಕು. ಇಂಗ್ಲೀಷ್ ಭಾಷೆ ಮತ್ತು ಮಾಧ್ಯಮಕುರಿತಂತೆ ಪೋಷಕರಲ್ಲಿರುವಆತಂಕ ಮತ್ತುತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲುಅವರಜತೆ ಸಂವಾದ ಮಾಡಬೇಕು.ಇದಕ್ಕಾಗಿಶಿಕ್ಷಣದಲ್ಲಿ ಮಾತೃಭಾಷೆಯನ್ನು ಅಳವಡಿಸುವ ಬಗ್ಗೆ ಒತ್ತಾಯಿಸುವಎಲ್ಲ ಸಂಘಟನೆಗಳು ಮತ್ತು ವ್ಯಕ್ತಿಗಳು ಸೇರಿಒಂದುಒಕ್ಕೂಟವನ್ನು ರಚಿಸಿಕೊಂಡು ಮುಂದಿನ ಹೋರಾಟವನ್ನು ಮಾಡಬೇಕೆಂದು ಸಮಾವೇಶವು ನಿರ್ಧರಿಸಿತು
                                    

Thursday 2 April 2015

ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ : ರಾಷ್ಟ್ರೀಯ ಚಿಂತನಾ ಶಿಬಿರ

ಕರ್ನಾಟಕ ಜನಸಾಹಿತ್ಯ ಸಂಘಟನೆ, ಧಾರವಾಡ
ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ : ರಾಷ್ಟ್ರೀಯ ಚಿಂತನಾ ಶಿಬಿರ
4-4-2015 ಹಾಗೂ 5-4-2015

                                             ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಪತ್ರಿಕಾ ಗೋಷ್ಟಿಗೆ ಟಿಪ್ಪಣಿಗಳು
ಮಾತೃಭಾಷೆಯಲ್ಲಿ ಶಿಕ್ಷಣ ಮಾಧ್ಯಮ ಕುರಿತಂತೆ ನ್ಯಾಯಾಲಯದ ಪ್ರತಿಕೂಲ ತೀರ್ಪು ದೊಡ್ಡ ಆಘಾತವನ್ನೇ ನೀಡಿದೆ. ಮಾತೃಭಾಷೆಯು ಶಿಕ್ಷಣದ ಮಾಧ್ಯಮವಾಗಿರಬೇಕು ಎಂದು ನಂಬಿದ್ದ ಮತ್ತು ಪ್ರತಿಪಾದಿಸುತ್ತಿದ್ದ ಎಲ್ಲರಲ್ಲಿಯೂ ನಿರಾಸೆ, ವಿಷಾದ ಹಾಗೂ ನೈತಿಕ ಪ್ರತಿರೋಧಗಳು ಕುದಿಯತೊಡಗಿವೆ. ಸವರ್ೋಚ್ಛ ನ್ಯಾಯಾಲಯದ ಪ್ರತಿಕೂಲ ತೀಪರ್ಿನ ನಂತರ ಕನರ್ಾಟಕದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಮಾತೃಭಾಷಾ ಮಾಧ್ಯಮದ ವಿಷಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದು, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನದ ಗೆಳೆಯರು ಕ್ರಿಯಾತ್ಮಕವಾಗಿ ತೊಡಗಿಕೊಂಡಿರುವುದು ಈ ಹಾದಿಯಲ್ಲಿ ನಡೆದ ಮಹತ್ವದ ಪ್ರಯತ್ನಗಳಾಗಿವೆ. ಕನರ್ಾಟಕದ ಸಾಕ್ಷಿಪ್ರಜ್ಞೆಯಂತಿರುವ ದೇವನೂರ ಮಹಾದೇವ ಅವರು ಕನ್ನಡವು ಪ್ರಾಥಮಿಕ ಹಂತದಲ್ಲಿ ಕಲಿಕೆಯ ಮಾಧ್ಯಮವಾಗುವ ತನಕ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸ್ವೀಕರಿಸುವುದಿಲ್ಲ ಎಂದು ಪರಿಷತ್ತಿನ ಮನವಿಯನ್ನು ನಿರಾಕರಿಸುವ ಮೂಲಕ ಹೊಸಸಂಚಲನ ಸೃಷ್ಟಿಯಾಗಿದೆ. ನಂತರ ಶ್ರವಣಬೆಳಗೊಳದಲ್ಲಿ ನಡೆದ 82ನೇ ಸಾಹಿತ್ಯ ಸಮ್ಮೇಳನವು ಮಾತೃಭಾಷಾ ಮಾಧ್ಯಮ ಪರವಾದ ಚರ್ಚೆಯನ್ನು ಮಾಡಿತು ಹಾಗೂ ನಿರ್ಣಯ ಕೈಗೊಂಡಿತು. ಇದರಿಂದ ಸರಕಾರ ಮಟ್ಟದಲ್ಲೂ, ಸಾಂಸ್ಕೃತಿಕಲೋಕದಲ್ಲೂ, ಶೈಕ್ಷಣಿಕ ಬದುಕಿನ ವಿಭಿನ್ನ ಸ್ತರಗಳಲ್ಲಿಯೂ ಈ ಕುರಿತಂತೆ ತಾತ್ವಿಕ ಜಿಜ್ಞಾಸೆ ಹಾಗೂ ಹೋರಾಟದ ದಾರಿಗಳ ಹುಡುಕಾಟಕ್ಕೆ ಚಾಲನೆ ದೊರೆತಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ತಾತ್ವಿಕ ಸ್ಪಷ್ಟತೆ ಹಾಗೂ ಚಳುವಳಿಯ ಮಾರ್ಗಗಳನ್ನು ಕಂಡುಕೊಳ್ಳುವುದಕ್ಕೆ ಕನರ್ಾಟಕ ಜನಸಾಹಿತ್ಯ ಸಂಘಟನೆಯು ಧಾರವಾಡದಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ಚಿಂತನಾ ಸಮಾವೇಶವನ್ನು ಸಂಘಟಿಸುತ್ತಿದೆ. 
ಬಹುತೇಕ ಕನ್ನಡಪರ ಹೋರಾಟಗಳ ಹುಟ್ಟಿಗೆ ನೆಲೆಯಾದ ಧಾರವಾಡದಲ್ಲಿ ಮಾತೃಭಾಷಾ ಮಾಧ್ಯಮ ಪರವಾದ ಹೋರಾಟಕ್ಕೂ ಚಾಲನೆ ಸಿಗಬಹುದೆಂಬ ಆಶಾವಾದದಿಂದ ಈ ಸಮಾವೇಶವನ್ನು ಸಂಘಟಿಸಲಾಗಿದೆ. ಈ ಸಮಾವೇಶಕ್ಕೆ ಮಾತೃಭಾಷಾ ಮಾಧ್ಯಮದ ವಿಷಯದಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಿರುವ ನಾಡಿನ ಚಿಂತಕರು, ಚಳುವಳಿಗಾರರು ಹಾಗೂ ಸಂಘಟನಾ ಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತಿದೆ. ಈ ಚಳುವಳಿಯು ಕನರ್ಾಟಕದಾಚೆಯೂ ವಿಸ್ತರಣೆಯನ್ನು ಪಡೆಯುವ ಅಗತ್ಯವಿರುವುದರಿಂದ, ಭಾರತದ ಬೇರೆಬೇರೆ ರಾಜ್ಯಗಳ ಚಿಂತಕರು ಹಾಗೂ ಚಳುವಳಿಗಾರರನ್ನು ಆಹ್ವಾನಿಸಲಾಗಿದೆ. ಒಟ್ಟಿನಲ್ಲಿ ಮಾತೃಭಾಷಾ ಮಾಧ್ಯಮದ ಪರವಾಗಿ ಚಿಂತನೆ ಹಾಗೂ ಕ್ರಿಯೆಯಲ್ಲಿ ತೊಡಗಿರುವ ಚಿಂತಕರು, ಸಾಹಿತಿಗಳು, ಕಾನೂನು ತಜ್ಞರು, ಪತ್ರಕರ್ತರು, ಕಲಾವಿದರು, ಶಿಕ್ಷಕರು, ಪಾಲಕರು, ಸಂಘಟನೆಗಳ ಪ್ರತಿನಿಧಿಗಳು, ವಿವಿಧ ಅಕಾಡೆಮಿ- ಪ್ರಾಧಿಕಾರಗಳ ಅಧ್ಯಕ್ಷರು, ಮಾತೃಭಾಷಾ ಮಾಧ್ಯಮದಲ್ಲಿ ಶಾಲೆಗಳನ್ನು ನಡೆಸುತ್ತಿರುವವರು-ಹೀಗೆ ಬಹುಮುಖಿ ವಲಯಗಳ ಪ್ರತಿನಿಧಿಗಳನ್ನು ಈ ಸಮಾವೇಶವು ಒಳಗೊಳ್ಳುತ್ತಿದೆ.
ಸಮಾವೇಶದ ಮೊದಲ ದಿನ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮದ ಸಾಧಕ ಬಾಧಕಗಳನ್ನು ಕುರಿತಂತೆ ತಾತ್ವಿಕ ಚಚರ್ೆ ನಡೆಸಿ ಸ್ಪಷ್ಟತೆಯನ್ನು ಪಡೆದುಕೊಳ್ಳುವದು; ಎರಡನೆಯ ದಿನ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನು ಅನುಷ್ಠಾನಕ್ಕೆ ತರುವ ನಿಟ್ಟಿನ ಸಾಧ್ಯತೆ ಕುರಿತಂತೆ ಚಿಂತನೆ ನಡೆಸಿ ಹೋರಾಟದ ದಾರಿಗಳನ್ನು ಕಂಡುಕೊಳ್ಳುವುದು, ಧಾರವಾಡದ ಪ್ರಮುಖ ಬೀದಿಗಳಲ್ಲಿ 'ಕನ್ನಡಕ್ಕಾಗಿ ನಡೆ'(ಜಾಥಾ) ಹಾಗೂ ಕೊನೆಯಲ್ಲಿ ಬಹಿರಂಗ ಅಧಿವೇಶನವನ್ನು ನಡೆಸುವುದು ಸಮಾವೇಶದ ವಿನ್ಯಾಸವಾಗಿದೆ. 
ಅನಿಲ್ ಸದ್ಗೋಪಾಲ್-ಭೂಪಾಲ್, ಜೋಗಾಸಿಂಗ್-ಪಟಿಯಾಲಾ, ಹರಗೋಪಾಲ-ಹೈದರಾಬಾದ್, ಪ್ರಿನ್ಸ್ ಗಜೇಂದ್ರಬಾಬು-ಮದ್ರಾಸ್, ದೇವನೂರ ಮಹಾದೇವ, ಪ್ರಸನ್ನ ಹೆಗ್ಗೋಡು, ವಿ. ಎಸ್. ಶ್ರೀಧರ್, ಅಗ್ರಹಾರ ಕೃಷ್ಣಮೂತರ್ಿ, ಎಂ.ಎಸ್. ಆಶಾದೇವಿ, ಕೆ.ವಿ.ನಾರಾಯಣ, ವಿ. ಪಿ.ನಿರಂಜನಾರಾಧ್ಯ, ಎಚ್.ವಿ. ವಾಸು, ಮಲ್ಲಿಕಾಜರ್ುನ ಮೇಟಿ, ಸ.ರ. ಸುದರ್ಶನ, ಬಿ. ಕೆ. ಎಸ್. ವರ್ಧನ್, ಬರಗೂರು ರಾಮಚಂದ್ರಪ್ಪ, ಕೆ.ಪಿ. ಸುರೇಶ್, ಕೆ.ಫಣಿರಾಜ್, ರಾಜೇಂದ್ರ ಚೆನ್ನಿ, ರವಿವರ್ಮ ಕುಮಾರ, ಜಿನದತ್ತ ದೇಸಾಯಿ, ಬಸವಪ್ರಭು ಹೊಸಕೇರಿ, ಕೋ. ಚೆನ್ನಬಸಪ್ಪ, ವೈ.ಎಸ್.ವಿ.ದತ್ತ, ಜಿ ವಿ ಶ್ರೀರಾಮ ರೆಡ್ಡಿ, ರವಿಕೃಷ್ಣಾ ರೆಡ್ಡಿ, ದಿನೇಶ್ ಅಮಿನ್ಮಟ್ಟು, ಎಲ್. ಹನುಮಂತಯ್ಯ, ಮಾವಳ್ಳಿ ಶಂಕರ್, ಸಿದ್ಧನಗೌಡ ಪಾಟೀಲ, ಲಕ್ಷ್ಮಿನಾರಾಯಣ ನಾಗವಾರ, ಮಲ್ಲಿಗ,ೆ ಗುರುಪ್ರಸಾದ ಕೆರಗೋಡು, ಕೆ.ಎಸ್.ವಿಮಲಾ, ಎಫ್ ಸಿ.ಚೇಗರೆಡ್ಡಿ, ಗುರುರಾಜ್ ದೇಸಾಯಿ, ಬಂಜಗೆರೆ ಜಯಪ್ರಕಾಶ್, ನಾ. ಡಿಸೋಜಾ, ಸಿದ್ಧಲಿಂಗಯ್ಯ, ಜಿ. ರಾಮಕೃಷ್ಣ, ಕಡಿದಾಳ್ ಶಾಮಣ್ಣ, ಮಾಲತಿ ಪಟ್ಟಣಶೆಟ್ಟಿ, ಕೆ.ಬಿ.ಸಿದ್ಧಯ್ಯ, ಕೆ.ರಾಮಯ್ಯ, ಎಸ್.ಜಿ.ಸಿದ್ದರಾಮಯ್ಯ, ಕೆ.ಎಸ್.ಪುಟ್ಟಣ್ಣಯ್ಯ, ಬಸವರಾಜ ಗುರಿಕಾರ, ಗೌರಿ ಲಂಕೇಶ್, ವಸುಂಧರಾ ಭೂಪತಿ, ರಹಮತ್ ತರೀಕೆರೆ, ಪಾಟೀಲ ಪುಟ್ಟಪ್ಪ.. ಮೊದಲಾದ ಹಿರಿಯರು, ಚಿಂತಕರು, ಹೋರಾಟಗಾರರು ಭಾಗವಹಿಸುತ್ತಾರೆ 
ಈ ಶಿಬಿರದಲ್ಲಿ ನಾಡಿನ ಬೇರೆ ಬೇರೆ ಜಿಲ್ಲೆಗಳಿಂದ 150 ಕ್ಕೂ ಹೆಚ್ಚು ಜನ ಚಿಂತಕರು ಸಂವಾದಕ್ಕಾಗಿ ಆಗಮಿಸುತ್ತಾರೆ. ಬಹಿರಂಗ ಅಧಿವೇಶನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂಗಾತಿಗಳು ಭಾಗವಹಿಸುತ್ತಾರೆ. ಎರಡು ದಿನಗಳ ಚಿಂತನ ಮಂಥನದಿಂದ ಹೋರಾಟದ ರೂಪರೇಶೆಗಳನ್ನು ಸಿದ್ಧಪಡಿಸುವುದರೊಂದಿಗೆ ಅದನ್ನು ಕಾರ್ಯಗತಗೊಳಿಸಲು ಎಲ್ಲ ಸಹಭಾಗಿ ಸಂಘಟನೆಗಳ ಒಕ್ಕೂಟವೊಂದನ್ನು ರೂಪಿಸಿಕೊಳ್ಳುವ ಸಾಧ್ಯತೆ ಇದೆ. ಬಹಿರಂಗ ಅಧಿವೇಶನದಲ್ಲಿ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನು ಕುರಿತಂತೆ ಧಾರವಾಡ ಘೋಷಣೆಯನ್ನು ಮಂಡಿಸಲಾಗುವುದು.
ಇದೊಂದು ಕಾರ್ಯಕ್ರಮ ಮಾತ್ರವಾಗಿರದೇ ಕನ್ನಡವನ್ನೊಳಗೊಂಡಂತೆ ಪ್ರಾದೇಶಿಕ ಭಾಷೆ, ಸಂಸೃತಿಗಳ ಉಳಿವಿನ ಹೋರಾಟದ ಪೂರ್ವ ತಯಾರಿಯಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ಹಲವಾರು ಚಚರ್ೆಗಳನ್ನು ಹುಟ್ಟು ಹಾಕುತ್ತ ಜಾಗೃತಿ ಮೂಡಿಸುತ್ತಿರುವ ತಾವು ನಮ್ಮೊಂದಿಗೆ ಕೈಜೋಡಿಸಬೇಕೆಂದು ವಿನಂತಿಸಿಕೊಳ್ಳುವೆ.

ವಂದನೆಗಳೊಂದಿಗೆ,

ಕರ್ನಾಟಕ ಜನಸಾಹಿತ್ಯ ಸಂಘಟನೆಯ ಪರವಾಗಿ ,
ಉತ್ತರ ಕನ್ನಡದಿಂದ