Sunday 23 February 2014

ಮಧ್ಯಮ ವರ್ಗದ ವಿವೇಕ ಪ್ರಜ್ಞೆ - ಪರ್ವತವಾಣಿ - ಡಾ.ಶ್ರೀಪಾದ ಭಟ್ ಶಿರಸಿ

                                             ಮಧ್ಯಮ ವರ್ಗದ ವಿವೇಕ ಪ್ರಜ್ಞೆ - ಪರ್ವತವಾಣಿ

ಭಾಷೆಯನ್ನು ಕಲಿಯುತ್ತಿರುವವರಿಂದ ರಂಗಭೂಮಿಯನ್ನು ದೂರವಾಗಿಸಿ, ಅದನ್ನು ಉತ್ಸವದ ಸರಕನ್ನಾಗಿಮಾತ್ರವೇ ಗೃಹಿಸುತ್ತ ಭಾಷೆ ಮತ್ತು ಸಂಸ್ಕೃತಿಗಿರುವ ಸಹಜ ಸಂಬಂಧವನ್ನು ಅಥರ್ೈಸಿಕೊಳ್ಳಲಾರದೇ ಏದುಸಿರು ಬಿಡುತ್ತಿರುವ ಕನ್ನಡರಂಗಭುಮಿಗೆ - ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿದ್ದ ಪರ್ವರವಾಣಿಯವರು ನೆನಪಾಗುತ್ತಿರುವದು ಸಕಾಲಿಕ.

             50 - 60 ರ ದಶಕದಲ್ಲಿ ಆಧುನಿಕ ರಂಗವ್ಯಾಕರಣವನ್ನೂ, ಭಾಷಾಬಳಕೆಯ ವಿವಿಧ ಸಾಧ್ಯತೆಗಳನ್ನೂ ಬಹುದೊಡ್ಡಮಟ್ಟದಲ್ಲಿ ಪರಿಚಯಿಸಿದ್ದು ಪರ್ವತವಾಣಿ ಮತ್ತವರ ಸ್ನೇಹಿತರು. ಶಾಲಾಕಾಲೇಜುಗಳಲ್ಲಿ ಕನ್ನಡ ರೂಪುಗೊಳ್ಳತ್ತಿರುವ ಕಾಲದಲ್ಲಿ, ಊರಿನ ಶಲಾಕಾಲೇಜುಗಳ ವಾಷರ್ಿಕೋತ್ಸವವೇ ಸುಶೀಕ್ಷಿತವಲಯದ ಬಹುಮುಖ್ಯ ಮನರಂಜನೆಯ ತಾಣವಾಗಿದ್ದ ಹೊತ್ತಿನಲ್ಲಿ ಪರ್ವರವಾಣಿಯವರು ಪ್ರವೇಶಿಸಿದ್ದರು. ಕಂಪನಿಗಳ ಸಾಮಾಜಿಕ ನಾಟಕಗಳು ಜನಪ್ರಿಯವಾಗುತ್ತಿದ್ದ ಕಾಲವದು. ಶಾಲಾ ಕಾಲೇಜುಗಳಿಗೆ ಈ ಕಂಪನಿ ನಾಟಕಗಳು ಆಡುವುದಕ್ಕೆ ತುಂಬದೀರ್ಘವೂ, ಹಲವು ಅತಿರೇಕಗಳ ಅಡ್ಡೆಯೂ ಅನಿಸಿದ್ದ ಆದರೆ ಅದರ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾರದ ಹೊತ್ತಿನಲ್ಲಿ ಸೂಕ್ತ ಮಧ್ಯಪ್ರವೇಶಿಕೆ ಮಾಡಿದ್ದು ಪರ್ವತವಾಣಿ ಮತ್ತವರ ಸ್ನೇಹ ವಲಯ. ಕಡಿಮೆ ಅವಧಿಯ,ಸರಳವಾಗಿ ಆಡಬಹುದಾದ,ಸೀಮಿತ ಪರಿಕರ ಮತ್ತು ಪರಿಸರದಲ್ಲಿ ನಿಭಾಯಿಸಬಹುದಾದ ಇವರ ನಾಟಕಗಳು ಬಹುಬೇಗ ಜನಪ್ರಿಯಗೊಂಡವು. ಬುದ್ದಿಗೆ ಕಚಕುಳಿ ಇಡುವಂತಿರುವ ಕಥಾ ಸಂವಿಧಾನ, ಭಾಷೆಯನ್ನು ಹಲವುಬಗೆಯಲ್ಲಿ ಬಳಸುವ ಪರಿ ಇವೆಲ್ಲವುಗಳಿಮದ ಖುಷಿಗೊಂಡ ಈ ಸಮುದಾಯ ರಂಗಭೂಮಿಯನ್ನು ವಾಷರ್ಿಕ ಕ್ರಿಯಾವಿಧಿಯನ್ನಾಗಿಸಿಕೊಂಡಿತ್ತು. ಅಲ್ಲದೇ ಪರ್ವತವಾಣಿ ಕಂಪನಿ ನಾಟಕಗಳಲ್ಲಿಯ ಟಿಪಿಕಲ್ ಆದ ಸ್ಥಾಯಿ ಪಾತ್ರಗಳಾದ ಅಣ್ಣ,ತಂಗಿ,ಅನಾರೋಗ್ಯದ ಅಪ್ಪ,ಕೆಡುಕಿನ ಧನಿಕ - ಇಂತಹ ಮಾದರಿಗಳನ್ನು ಬಿಟ್ಟು ಯಾವ ಮಧ್ಯಮವರ್ಗದ ಕುಟುಂಬಗಳಲ್ಲಿಯೂ ಇರಬಹುದಾದ ಪಾತ್ರಗಳನ್ನು ಸೃಷ್ಟಿಸಿದ್ದರಿಂದ ಅದರ ವಾಸ್ತವದ ಸಾಮೀಪ್ಯತೆ ನೂತನ ಶಿಕ್ಷಿತವಲಯಕ್ಕೆ ಆತ್ಮೀಯವೆನಿಸಿತು.

              ಕೈಲಾಸಂ ಆರಂಭಿಸಿದ ಆಧುನಿಕ ನಾಟಕ ಪರಂಪರೆಯನ್ನು ಮುಂದುವರಿಸಿ ಅಷ್ಟೇ ಅಲ್ಲದೇ ಅದನ್ನು ವಿಸ್ತರಿಸಿದವರು ಪರ್ವತವಾಣಿ. ಕೈಲಾಸಂ ಅವರ ಕನ್ನಡಾಂಗ್ಲವನ್ನು ಒಂದು ಹದಕ್ಕೆ ತಂದು , ಪಟ್ಟಣಿಗರ ಆಡುಮಾತಿನ ಲಯ, ಅದಕ್ಕೆ ಗ್ರಂತಸ್ಥ ಭಾಷೆಯ ಲೇಪ - ಮುಂದೆ ಅದೇ ಒಂದು ಮಾದರಿಯಾಗಿ ಭಾಷಾ ಪ್ರಕಾರವಾಗಿ ಪಟ್ಟಣದ ಭಾಷಿಕವಲಯದಲ್ಲಿ ಜನಪ್ರಿಯಗೊಂಡು, ಸಿನೆಮಾದ ಮೂಲಕ ವ್ಯಾಪಕತೆ ಪಡೆದದ್ದು ದಾಖಲಾರ್ಹ ಇತಿಹಾಸ. 

           ಪರ್ವತವಾಣಿ ಸಾಕಷ್ಟು ಪ್ರಗತಿಪರರು. ಈ ನಿಟ್ಟಿನಲ್ಲಿ ಕೆಲವೊಮ್ಮೆ ಅವರ ಗುರು ಕೈಲಾಸಂ ಎಲ್ಲಿ ನಿಂತುಬಿಡುತ್ತಾರೋ ಅಲ್ಲಿ ಇವರು ಮುಂದಡಿ ಇಡುತ್ತಾರೆ. ನಾಟಕ ಕ್ಷೇತ್ರದ ಪ್ರಗತಿಶೀಲರೆಂದು ಇವರನ್ನು ಕರೆದರೆ ತಪ್ಪಿಲ್ಲ. ಒಂದುರೀತಿಯಲ್ಲಿ ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಪ್ರಗತಿಶೀಲರು ನೀಡಿದ ಕೊಡುಗೆಯನ್ನೇ ನಾಟಕಕ್ಷೇತ್ರಕ್ಕೆ ಪರ್ವತವಾಣಿಯವರು ನೀಡಿದ್ದರೆ. ಪಠ್ಯದ ಸಾಮಾಜಿಕ ಜವಾಬ್ದಾರಿಯನ್ನೂ ಜನಪ್ರಿಯತೆಯನ್ನೂ ಹೆಚ್ಚಿಸಿದ್ದಾರೆ.

              ನಿಜ. ಅವರದ್ದು ಮಧ್ಯಮವರ್ಗದ ಪ್ರಪಂಚ. ಮಧ್ಯಮವರ್ಗದ ನೈತಿಕತೆಯ ಒಳಗೆ ಎಷ್ಟು ಸಾಧ್ಯವೋ ಅಷ್ಟು ಪ್ರಗತಿಪರತೆಯನ್ನು ಸಾಧಿಸಿದವರು ಅವರು. ಆದರೆ ಈ ನೈತಿಕ ಜವಾಬ್ದಾರಿಗಾಗಿ ರಂಗಭುಮಿಯ ' ಈಠಡಿಟ 'ನ್ನು ಬಲಿಕೊಟ್ಟವರಲ್ಲ ಅವರು. ಈ  ಕುರಿತು ಅವರಲ್ಲಿ ಖಚಿತ ನಿಲುವು ಇತ್ತು. ಮೋಲಿಯೇರ್ನ ನಾಟಕಗಳ ರೂಪಾಂತರದ ಮುನ್ನುಡಿಯಲ್ಲಿ ಅವರು ಹೇಳಿದ ಮಾತುಗಳಿವು.  . . . ನಾಟಕಕಲೆಯಲ್ಲಿ ಹೆಚ್ಚು ಜನರನ್ನು ಸಂಪಕರ್ಿಸುವ . . . ಹೀಗೆ ಸಂಪಕರ್ಿಸಿ ಸನ್ಮಾರ್ಗಕ್ಕೆ ಎಳೆಯುವ ಪ್ರಯತ್ನ ಮಾಡುವ ಅವಕಾಶವಿದೆ. . . ಆದರೆ ಕಪ್ಪುನಾಯಿಯನ್ನು ಬಿಳಿನಾಯಿ ಮಾಡುತ್ತೇವೆಂದು ಅತಿ ಉತ್ಸಾಹದಿಂದ ಹೊರಟು ನಾಯಿಯನ್ನೇ ಮಂಗ ಮಾಡಿದ್ದೇವೆ. . . . ನಾಟಕ ಕಲೆ. ಇದಕ್ಕೆ ಪ್ರಥಮ ಸ್ಥಾನ. ನಂತರ ತಲೆ. ಎರಡೂ ಕೂಡಿದರೆ ಹೆಚ್ಚು ಬೆಲೆ. ಬರಿ 'ತಲೆ'ಯಷ್ಟನ್ನೇ ರಂಗಮಂಚದ ಮೇಲಿಟ್ಟರೆ ಪ್ರೇಕ್ಷಕರು ನೋಡುವುದಿಲ್ಲ. ಓಡುತ್ತಾರೆ. ತಲೆ - ಕಲೆ ಎರಡೂ ಕೂಡಿದ ಬೆಲೆಯುಳ್ಳ ಸಪ್ತಪದಿ ಯಂತಹನಾಟಕಗಳನ್ನು ಪರ್ವತವಾಣಿ ರಚಿಸಿದ್ದಾರೆ.

  ಸ್ವತಂತ್ರ ನಾಟಕಗಳ ಜತೆ ಅನೇಕ ರೂಪಾಂತರಗಳನ್ನೂ ನೀಡಿ ರಂಗಭೂಮಿಯನ್ನು ಸಮೃದ್ಧಿಗೊಳಿಸಿದ  ಪರ್ವತವಾಣಿಯವರನ್ನು ವಿಮರ್ಶಕರು ಅಷ್ಟಾಗಿ ಗಮನಿಸಿಲ್ಲ. ಜನಪ್ರಿಯತೆಯನ್ನು ಅನುಮಾನದಿಂದ ನೋಡಲು ಆರಂಭಿಸಿದ ಕಾಲಘಟ್ಟದಿಂದ ಇಂತವರ ಕೊಡುಗೆಯನ್ನು ಗೌರವಿಸದಿರುವ ಒಂದು ಸಂಕಥನವೇ ರೂಪುಗೊಂಡಿರುವ ಹಿನ್ನೆಲೆಯಲ್ಲಿಯೇ ನಾವಿದನ್ನು ಕಾಣಬಹುದಾಗಿದೆ. ಹೀಗೆ ಅನಾದರಕ್ಕೊಳಗಾಗಿದ್ದು ಪರ್ವತವಾಣಿ ಮಾತ್ರವಲ್ಲ ಶಲಾ ಕಾಲೇಜುಗಳ ರಂಗಭೂಮಿಯೂ ಹೌದು. ಈಗ ಶತಮಾನೋತ್ಸವದ ಶುಭ ಅವಸರದಲ್ಲಿ ಪರ್ವತವಾಣಿಯವರ ನಾಟಕಗಳನ್ನು ಪುನರವಲೋಕಿಸುತ್ತಿದ್ದೇವೆ. ಇದು ಕನ್ನಡ ರಂಗಭೂಮಿಗೆ ಸಕಾಲಿಕ. ಪರ್ವತವಾಣಿಯವರ 3 ನಾಟಕಗಳ ಕಿರು ಅವಲೋಕನದೊಂದಿಗೆ ಈ ನಿಲುವನ್ನು ಮುಂದುವರಿಸಬಹುದು.  

                              ತಪ್ಪು ಹೆಜ್ಜೆ
ತಾರಾನಾಥ - ತಾರಾಬಾಯಿ ಇವರ ಮಗ ರವಿ. ಸೊಸೆ ರೂಪಾ. ರೂಪಾಳಿಗೆ ಮಕ್ಕಳಿಲ್ಲ. ಗಂಡ ರವಿಗೆ ಮಕ್ಕಳಾಗುವ ಯೋಗವಿಲ್ಲ. ವೈದ್ಯರು ಹೀಗೆಂದು ಕೊಟ್ಟ ರಿಪೋರ್ಟನ್ನು ಆತ ಯಾರಿಗೂ ತೋರಿಸದೇ ಮುಚ್ಚಿಟ್ಟಿದ್ದಾನೆ. ಯಥಾ ಪ್ರಕಾರ ಅತ್ತೆಯ ನಿಂದನೆಗೆ, ಆಚೆ ಈಚೆಯವರ ಕುತ್ಸಿತ ನುಡಿಗೆ ರೂಪಳ ಬಲಿ. ಬಂಜೆ ತನದ ಬಿರುನುಡಿಗೆ ಆಘಾತಗೊಂಡು ದಾರಿಹೋಕನೊಬ್ಬನನ್ನು ಕೂಡಿ ಆಕೆ ಗಭರ್ಿಣಿಯಾಗುತ್ತಾಳೆ. ಹೆಂಡತಿ ಗಭರ್ಿಣಿಯಾದದ್ದು ಗಂಡನಿಗೆ ಆಘಾತ ತಂತು. ಸತ್ಯ ಹೊರಬಿತ್ತು. ಆದರೆ ರೂಪ ನಿಸ್ಸಹಾಯಕಳದಳು. ಈ  ಪರಿಸ್ಥಿತಿಯಿಂದ ಪಾರಾಗಲು ಆಕೆ ನಿದ್ದೆಗುಳಿಗೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ವಿವೇಕಿಯಾದ ಮಾವ ತಾರಾನಾಥರ ಔಚಿತ್ಯದ ನಡೆಯಿಂದ ಅತ್ತೆ, ಗಂಡ ರೂಪಾಳನ್ನು ಅವಳ ಮಗುವಿನ ಸಮೇತ ಒಪ್ಪಿಕೊಳ್ಳುತ್ತಾರೆ. ಇದು ನಾಟಕದ ಸಂವಿಧಾನ. ರೂಪಾ ಇಟ್ಟಿದ್ದು ಮಾತ್ರ ತಪ್ಪುಹೆಜ್ಜೆ ಆಗದೇ ಅವಳನ್ನು ಆ ಸಂದರ್ಭಕ್ಕೆ  ನೂಕಿದ ಸಮಾಜದ ಹೆಜ್ಜೆಗಳ ತಪ್ಪನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಈ ನಾಟಕ ಸಂಕಲನದ ಭರತವಾಕ್ಯದಲ್ಲಿ ಬೇಂದ್ರೆ ಹೇಳುವಂತೆ  ತಪ್ಪು ಹೆಜ್ಜೆಯಲ್ಲಿ ತಪ್ಪೇನಿದೆ? ಬೆಪ್ಪಿದೆ. ಬೆರಗಿದೆ. ಅದೂ ಕರಗಿದೆ. ಸಹ್ಯ ಜೀವನದ ವಿವೇಕ

                   ಜೀವನವನ್ನು ಸಹ್ಯಗೊಳಿಸುವುದು ಕಲೆಗಳ ಉದ್ದೇಶಗಳಲ್ಲೊಂದು. ಲೋಕಾರೂಢಿಯ ಹಲವು ಸ್ವಭವಗಳು ಇಲ್ಲಿ ಚಿತ್ರಿತಗೊಂಡಿದೆ. ತಾರಾ ನಾಥರಾಯರ ಪಾತ್ರ ನಾಟಕದ ಒಟ್ಟೂ ಪ್ರದರ್ಶನಕ್ಕೆ ಒಂದು ಲವಲವಿಕೆಯನ್ನು, ಬದುಕಿಗೊಂದು ಔಚಿತ್ಯವನ್ನೂ ಕೊಡುತ್ತದೆ. ಮಾತೂ ಅಷ್ಟೆ ಹಲವು ಅರ್ಥಗಳನ್ನು ವ್ಯಂಜಿಸಲು ಆಗಾಗ ಪ್ರಯತ್ನಿಸುತ್ತದೆ. ಉಧಾ .- ರೂಪಾಳಿಗೆ ಕೊನೆಯಲ್ಲಿ ಎಚ್ಚರ ಬಂದಾಗ ಅತ್ತೆ ತಾರಾಬಾಯಿ  'ಜ್ಞಾನಬಂತು . . ಜ್ಞಾನಬಂತು ' ಎಂದು ಹೇಳುವದು ಕೇವಲ ರೂಪಾಳಿಗೆ ಬಂದ ಭೌತಿಕ ಜ್ಞಾನದ ಕುರಿತಾದ  ಮಾತಾಗದೇ ಅವಳಿಗೇ ಬಂದ ಜ್ಞಾನದ ಕುರಿತೂ ಆಡುವ ಮಾತಾಗುವಂತೆ ನಾಟಕಕಾರ ಬಳಸಿದ್ದಾನೆ.

                                          ಸಪ್ತಪದಿ
ಈ ಸಂಕಲನದ ಅತ್ಯುತ್ತಮ ನಾಟಕ. ತಾಂತ್ರಿಕವಾಗಿಯೂ ತುಂಬ ಬಿಗಿಯಾದ ಬಂಧದ ನಾಟಕವಿದು. ವಸ್ತುವಿನಲ್ಲಿಯೂ ತುಂಬ ಪ್ರಗತಿಪರವಾದ ನಿಲುವಿನ, ಸಂಪ್ರದಾಯವಾದಿಗಳಿಗೆ 'ಠಞ ' ನೀಡುವ ನಾಟಕ. ಹೀಗೆ ಆಶಯ - ಆಕೃತಿ ಎರಡರಲ್ಲೂ ಛಂದದ ನಾಟಕ.
       ನಾಟಕ ನಡೆಯುವುದು ಮದುವೆ ಮಂಟಪದಲ್ಲಿ. ನಾಟಕ ನಡೆಸುವ ಸೂತ್ರಧಾರ, ಮದುವೆಯ ಸೂತ್ರಧಾರನಾದ ಪುರೋಹಿತ. ರಾಜು ಮತ್ತು ಸರಸು ಎನ್ನುವವರು ಮದುವೆ ಮನೆಯ ಗಂಡು ಹೆಣ್ಣು. ಮಾಂಗಲ್ಯ ಕಟ್ಟಿ ಮುಗಿದಿದ್ದರೂ ಸಪ್ತಪದಿ ತುಳಿಯುವ ಕ್ರಿಯೆ ಇನ್ನೂ ಆಗ ಬೇಕಿದೆ.  ಪುರೋಹಿತರ ಪ್ರಕಾರ ಮಾಂಗಲ್ಯ ಧಾರಣೆ ಆದರೂ ಮದುವೆ ಆದಂತಲ್ಲ. ಇನ್ನೂ ಅವರು ಗಂಡು - ಹೆಣ್ಣ ಅಷ್ಟೆ. ಸಪ್ತಪದಿ ತುಳಿದ ಮೇಲೆಯೇ ಗಂಡ ಹೆಂಡತಿ. ಅವರಿಗೆ ಅರ್ಥವಾಗುವಂತೆ ಆತ ಸಂಸ್ಕೃತದ ಸಪ್ತಪದಿಯ ಮಂತ್ರಗಳನ್ನು ಕನ್ನಡದಲ್ಲಿಯೂ ಅನುವಾದಿಸಿ ಹೇಳುತ್ತಾನೆ. 7 ಹೆಜ್ಜೆಗೆ 7 ಮಂತ್ರ. ರಾಜೂ ಸರಸು ಇವರ ವಲ್ಲಿ ಮತ್ತು ಸೆರಗಿಗೆ ಗಂಟು ಹಾಕಲಾಗಿದೆ. ಪುರೋಹಿತರ ಮಂತ್ರದೊಂದಿಗೆ ಒಂದೊಂದೇ ಹೆಜ್ಜೆ ಆರಂಭ. ನಿಜವಾದ ನಾಟಕ, ನಾಟಕದೊಳಗಿನ ನಾಟಕ ಆರಂಭಗೊಳ್ಳುತ್ತದೆ.

   ಪ್ರತಿ ಮಂತ್ರ ಮತ್ತು ಹೆಜ್ಜೆಗು ಸರಸು ಮತ್ತು ರಾಜು ಒಬ್ಬರಾದ ಮೇಲೆ ಒಬ್ಬರಂತೆ ತಮ್ಮ ಗತ ಜೀವನವನ್ನು ನೆನಪಿಸಿಕೊಳ್ಳುತ್ತಾರೆ. ಪ್ರತಿ ಮಂತ್ರದ ಹೆಜ್ಜೆಗೊಮ್ಮೆ ಹಿನ್ನೋಟ. ಈ ಹಿನ್ನೋಟದಲ್ಲಿಯೂ ಕ್ರಮವಿದೆ. ಆ ನೆನಪಿಗೂ ಒಂದು ತಾಕರ್ಿಕಗತಿಯಿದೆ. ಅದು ಸಪ್ತಪದಿಯ ಪ್ರತಿಹೆಜ್ಜೆಯ ಮಂತ್ರದ ಅರ್ಥವನ್ನು ಆಧರಿಸಿದೆ. ಉಧಾ:'ಸಂಸಾರಕ್ಕೆ ನೆರವಾಗು' ಎಂದು ಗಂಡು ಹೆಣ್ಣನ್ನು ಕೇಳಿಕೊಳ್ಳುವ ಮೊದಲ ಹೆಜ್ಜೆಯ ಮಂತ್ರವನ್ನು ಪುರೋಹಿತರು ಹೇಳಿದಾಗ ಸರಸುವಿಗೆ, ವರದಕ್ಷಿಣೆ ಕೇಳಲು ಬಂದ ಗಂಡೊಬ್ಬನ ತಂದೆಯ ಜೊತೆಗಿನ ಮನಸ್ತಾಪದ ಘಟನೆ ನೆನಪಾಗುತ್ತದೆ. 'ಶರೀರ ಕ್ರಿಯೆಗೆ ನೆರವಾಗು' ಎಂಬ ಮಂತ್ರಕ್ಕೆ ಹೆಜ್ಜೆಹಾಕುವಾಗ ರಾಜುವಿಗೆ, ತಾನು ವಾರಾನ್ನ ಉಣ್ಣುತ್ತಿದ್ದ ಮನೆಯ ಯಜಮಾನನ ಹೆಂಡತಿ ತನ್ನ ಶರೀರಕ್ಕೆ ಸೋತು ಆಕ್ರಮಿಸ ಬಂದ ನೆನಪು - ಹೀಗೆ ಆರು ಹೆಜ್ಜೆಗೆ ಆರು ನೆನಪು. ಈ ನೆನಪುಗಳಿಗೆ ಇನ್ನೊಂದು ತರ್ಕವೂ ಇದೆ. ಅದೆಂದರೆ ಸರಸು ಕಾಣುವ ನೆನಪು ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ್ದರೆ ರಾಜು ಕಾಣುವ ನೆನಪು ಹೆಣ್ಣಿನ ತಪ್ಪಿನ ನಡೆಗೆ ಸಂಬಂಧಿಸಿದ್ದಾಗಿರುತ್ತದೆ. ಏಳನೇ ಹೆಜ್ಜೆ ಇನ್ನೇನು ಆರಂಭವಾಗಬೇಕು ಆಗ ಇಬ್ಬರೂ ಪುರೋಹಿತರಲ್ಲಿ ಮಂತ್ರ ನಿಲ್ಲಿಸಲು ಹೇಳಿ, ಕೋಣೆಯೊಂದರಲ್ಲಿ ಮನಬಿಚ್ಚಿ ಮಾತನಾಡಿಕೊಳ್ಳುತ್ತಾರೆ. ಇಬ್ಬರೂ ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಇಬ್ಬರ ಮಾತುಗಳಲ್ಲಿಯೂ ಅವರ ಗತದ ನೆನಪಿನ ಕಹಿ ಇದೆ. ಹೆಣ್ಣು ಗಂಡಿನ ಸಮಾನತೆ,ದುಡಿಯುವ ಹಕ್ಕಿನ ಸಂಬಂಧದ ಚಚರ್ೆಯನಂತರ ಇಬ್ಬರೂ ಒಮ್ಮತದಿಂದ ಹೊರಬಂದು ಎಲ್ಲರೆದುರೂ ನಾಟಕೀಯವಾಗಿ ತಮ್ಮ ವಲ್ಲಿ - ಸೆರಗಿನ ಕೊನೆಗೆಹಾಕಿದ ಗಂಟನ್ನು ಬಿಡಿಸಿಕೊಂಡು, ಸೇರಿದವರೆಲ್ಲ ಛೀ ಎನ್ನುತ್ತರುವಂತೆ ಮದುವೆಯಿಂದ ದೂರ ಸರಿಯುತ್ತಾರೆ.

     ರಂಗ ತಂತ್ರ, ಸಂಭಾಷಣೆ, ನಾಟಕದ ಸಂವಿಧಾನ ಇವೆಲ್ಲ ತುಂಬ ಆಸ್ಥೆಯಿಂದ ಒಂದರೊಳಗೊಂದು ಹೊಂದಿಕೊಂಡ ನಾಟಕವಿದು. ಮಾತು-ಕ್ರಿಯೆ ಎರಡರಲ್ಲೂ ಒಂದು ಬಂದವಿದೆ. ನಾಟಕದ ಸೂತ್ರಧಾರನೇ ಆದ ಮದುವೆಯ ಸುತ್ರಧಾರ ಪುರೋಹಿತ ಆರಂಭದಲ್ಲಿಯೇ ಆಡುವ ಮಾತು ನಾಟಕದ ಕುರಿತ ಮುಂದಿನ ನಡೆಯನ್ನು ಸುಚಿಸುತ್ತದೆ.  . . . ನೀವು ಏಳನೇ ಹೆಜ್ಜೆ ಇಡುವುದರೊಳಗೆ ಏನಾದರೂ ಆಕಸ್ಮಿಕ ಆಗಿ ಈ ಶಾಸ್ತ್ರ ನಿಂತಿತೂ . . .  ನಾಟಕದಲ್ಲಿ ಈ ಶಾಸ್ತ್ರ ನಿಂತೇ ಹೋಗುತ್ತದೆ. ಅಲ್ಲದೇ ನಟಕದಲ್ಲಿ ಪುರೋಹಿತರಾಡುವ ಮಾತು ಈ ನಾಟಕದ ಆಶಯವನ್ನೂ ಧ್ವನಿಸುತ್ತದೆ.  . . . ಹೆಂಗಸಿಗೆ ಮೀಸೆ ಇಲ್ಲ. ಗಂಡಸಿಗಿದೆ. ಆದ್ದರಿಂದ ಅವನು ಕೂತಿರ ಬೇಕು, ಅವಳು ಓಡಾಡುತ್ತಿರಬೇಕು ಅನ್ನುವ ಪದ್ಧತಿ ತಪ್ಪು. ಶಾಸ್ತ್ರದ ಸರಿಯದ ಅಥ್ ತಿಳಿದುಕೊಂಡರೆ ಇಬ್ಬರು . . . ಹೆಜ್ಜೆಯಿಡಬೇಕು.

ತಮ್ಮ ಚಚರ್ೆಯನಂತರ ಕೋಣೆಯೊಳಗಿನಿಂದ ಹೊರಬರುವಾಗ ರಾಜು ಮತ್ತು ಸರಸು ಇವರಾಡುವ ಮತುಗಳನ್ನು ನೋಡಿ.
ರಾಜು: ನಡೆಯಿರಿ
ಸರಸು: ನೀವು ಮುಂದೆ
ರಾಜು: ಉಂಟೆ? ಲೇಡೀಸ್ ಫಸ್ಟ್. ನಿವು ಮುಂದೆ
ಸರಸು:  . . . ಬೆಡ . . ಬೇಡ . . . ಒಟ್ಟಿಗೆ . . .
  ನಾಟಕದಲ್ಲಿ 17 ದೃಶ್ಯಗಳಿವೆ. ಯಾವ ದೃಶ್ಯವೂ ದೀರ್ಘವಾಗದೇ ವೇಗವಾಗಿ ಸಾಗುತ್ತದೆ. ಕೇವಲ ಕ್ರಿಯೆಯೊಂದನ್ನೇ ಸೂಚಿಸುವ, ಮತಿಲ್ಲದ ದೃಶ್ಯವೂ ಇದೆ.  ಮಾತು, ನಟಕದ ಲಯವನ್ನು ಕೊಂಡೊಯ್ಯುವ ರೀತಿ ಗಮನಾರ್ಹವಾದುದು. ಉಧಾ: ದೃಶ್ಯ 1ರ ಕೊನೆಯ ಮಾತು  . . ಮೊದಲ ಹೆಜ್ಜೆ ಎಂದಿದ್ದರೆ 2ನೇ ದೃಶ್ಯದ ಮೊದಲ ಮಾತು 'ಮೊದಲ ಹೆಜ್ಜೆ'ಯನ್ನು ಒಳಗೊಂಡಿದೆ. ನಾಟಕದುದ್ದಕ್ಕೂ ಇಂತಹ ಲಯವನ್ನು ಸಂಬಾಳಿಸಲಾಗಿದೆ.

                                                        ಫೋರೆನ್ ಮಾಲು
ಮುದುಕನೊಬ್ಬ ಪ್ರೇಕ್ಷಕರಿಗೆ ವಿದೇಶೀ ಸರಕಿನ ವ್ಯಾಮೋಹದಿಂದ ತೊಂದರೆಗೊಳಗಾದವರ ಕತೆಗಲನ್ನು ತೋರಿಸುತ್ತ ಸಗುವ ನಾಟಕವಿದು. ವಿದೇಶೀ ಸೀರೆಗೆ ಮರುಳಾಗುವ ಹೆಂಗಸರು, ವಿದೇಶದಲ್ಲಿಯೇ ಉತ್ತಮ ಪ್ರಶಂಸೆಗೆ ಒಳಗಾಗುವ ದೇಶೀ ಗಡಿಯಾರ, ಫಾರಿನ್ ಅಳಿಯನನ್ನು ಮಡಿಕೊಳ್ಳುವ ಹುಚ್ಚಿನಲ್ಲಿ ಮೋಸ ಹೋದ ಅಪ್ಪ, ತಾಯಂದಿರನ್ನು ತುಳಸೀಕಟ್ಟೆಯ ಅಮ್ಮಂದಿರೆಂದು ಜರಿಯುವ ಹುಡುಗಿಯರು, ಮಮ್ಮಿ - ಡ್ಯಾಡಿ ಉಲಿಯುವ ಮಕ್ಕಳು, ಫಾರಿನ್ ಸಿನೆಮ ನೊಡಿ ಅನುಕರಿಸ ಹೊರಟು ಸಿಕ್ಕಿಬಿದ್ದ ಕಳ್ಳ, ವಿದೇಶೀ ನಾಟಕದ ಅನುಕರಣೆಯಲ್ಲಿ ಸಿಕ್ಕಿದ ಅಸಂಗತ ನಾಟಕದ ದೃಶ್ಯ, - ಇವೆಲ್ಲವನ್ನು ಕಾಣಿಸಲು ಪ್ರಯತ್ನಿಸುತ್ತದೆ. ಸ್ವದೇಶಿ ಆಂದೋಲನದ ಹರಿಕಾರರಾದ ಗಾಂಧಿಯನ್ನು ಮರೆತ ಸಮಕಾಲೀನ ಸಮಾಜದ ವಿಡಂಬನೆ ಇದರ ಉದ್ದೇಶ. 
     ಸ್ವದೇಶಿ - ವಿದೇಶಿಯನ್ನು ತುಸು ಸರಳೀಕರಿಸಿದ ನಟಕ ಎಂದೆನಿಸಿದರೂ ಕೆಲವು ಆಸಕ್ತಿದಾಯಕ ಸಂಗತಿಗಳೂ ಈ ನಾಟಕದಲ್ಲಿದೆ. ಆರಂಭದಲ್ಲಿ ಪ್ರೇಕ್ಷಕರೊಂದಿಗೆ ಮಾತನಾಡುವ ಮುದುಕ ಸೂತ್ರಧಾರನಾಗಿ ಬೆಳೆಯುವದು ಪ್ರಯೋಗದ ಕುತೂಹಲ ಹೆಚ್ಚಿಸುತ್ತದೆ. ಆ ಕಾಲದಲ್ಲಿ ಪ್ರಚಾರಕ್ಕೆ ಬಂದ ಅಸಂಗತ ನಾಟಕವನ್ನು ಲೇಖಕರು ಸಾಹಿತ್ಯದ ಫೋರೆನ್ ಮಾಲು ಎಂದು ಕರೆದಿರುವದು, ನಾಟಕ-ಪ್ರೇಕ್ಷಕರನ್ನು ಕುರಿತ ಮಾತುಗಳು ಚಚರ್ೆಗೆ ಅವಕಾಶ ನೀಡುತ್ತದೆ. ಫಾರಿನ್ ಅಳಿಯನಿಗೆ ಮಗಳನ್ನು ಕೊಟ್ಟು ಬೇಸ್ತು ಬಿದ್ದ ಅಪ್ಪನಿಗೆ ಮಗಳು ಬರೆದ ಕಾಗದದಲ್ಲಿ ಬದುಕಿನ ವಿವೇಕವೂ ಇದೆ. ಆಕೆ ಅಂತಾಳೆ  . . . . ಆದರೂ ನಾನು ಆತ್ಮಹತ್ಯೆ ಮಾಡಿಕೊಳ್ಳೊಲ್ಲ .

           'ಸಪ್ತಪದಿ', 'ತಪ್ಪುಹೆಜ್ಜೆ','ಫೋರೆನ್ ಮಾಲು' - ಈ ಮೂರೂ ನಾಟಕಗಳ ವಸ್ತು ವಿನ್ಯಾಸ ಬೇರೆ ಬೇರೆಯಾಗಿದ್ದರೂ ಇವುಗಳ ಆಶಯದಲ್ಲಿ ಸಾಮ್ಯತೆಗಳಿವೆ. ಇವು ಮೂರೂ 'ಸರಿ ಪಡಿಸಿಕೊಳ್ಳ ಬಹುದಾದ ತಪ್ಪುಗಳ'ಕುರಿತು ಮಾತನಾಡುತ್ತದೆ. 'ಸಪ್ತಪದಿ' ವ್ಯಕ್ತಿಗತವಾಗಿ ಗಂಡು ಹೆಣ್ಣಿನ ಕುರಿತು, ಹೆಣ್ಣು ಗಂಡಿನ ಕುರಿತು ತಳೆಯುವ ತಪ್ಪು ಅಭಿಪ್ರಾಯವನ್ನು ದೂರ ಮಡಿಕೊಳ್ಳಲು ಇರುವ ಅವಕಾಶದ ಕುರಿತು ಹೇಳಿದರೆ, 'ತಪ್ಪುಹೆಜ್ಜೆ' ಕುಟುಂಬವೊಂದು ತಳೆಯುವ ತಪ್ಪು ನಿಧರ್ಾರವನ್ನು ಸರಿಪಡಿಸುತ್ತದೆ. 'ಫಾರಿನ್ ಮಾಲು' ಸಮಾಜ ಇಡುತ್ತಿರುವ ತಪ್ಪು ಹೆಜ್ಜೆಯಕುರಿತು ಎಚ್ಚರಿಸುತ್ತದೆ. ಹೀಗೆ ವ್ಯಕ್ತಿ,ಕುಟುಂಬ,ಸಮಾಜ - ಈ ಮೂರೂ ಸ್ತರಗಳಲ್ಲಿಯೂ ಇಡುತ್ತಿರುವ ತಪ್ಪು ಹೆಜ್ಜೆಗಳನ್ನು ಸರಿಪಡಿಸಿಕೊಳ್ಳಬೇಕಾದ ವಿವೇಕದ ಕುರಿತು ಇವು ಗಮನ ಸೆಳೆಯುತ್ತವೆ.

             ಬದುಕಿನ ಬಗ್ಗೆ ಗಾಢವಾದ ಪ್ರೀತಿ, ವ್ಯವಸ್ಥೆಯ ಒಳಗಿದ್ದೇ ಅದರ ಪರಿಧಿ ಹಿಗ್ಗಿಸುವ ಪ್ರಯತ್ನ ಅವರ ನಟಕಗಳ ಸ್ಥಾಯಿಭಾವ. ಮಧ್ಯಮತನ ಕೇವಲ ಅವರ ವರ್ಗಪ್ರಜ್ಷೆಗೆ ಮಾತ್ರ ಸಂಬಂಧಿಸಿದುದಲ್ಲ. ಅದು ಅವರ ನಿಲುವಿಗೂ ಸಂಬಂಧಿಸಿದುದು.ಹಾಗಾಗಿ ಕೆಲವೊಮ್ಮೆ ಅವರು ತೀರ ಬಿಸಿಯಲ್ಲ ಅನಿಸುತ್ತದೆ. ಆದರೆ ಅವರು ತೀರ ತಂಪೂ ಅಲ್ಲ. ಅವರು ಉಗುರು ಬೆಚ್ಚನೆಯ ಅನುಭವ ನೀಡುವಂತವರು.
          ಹೆಚ್ಚು ಅರ್ಥ ವ್ಯಂಜಕತೆಗೆ ಆಸ್ಪದ ಮಾಡಿಕೊಡುವ ಚಿಕ್ಕಚಿಕ್ಕ ಮಾತುಗಳು, ಕುತೂಹಲ ಹುಟ್ಟಿಸುವ ಆರಂಭಗಳು, ಚಿಕ್ಕದಾದ ಒಗಟೊಂದನ್ನು ಒಡಲಲ್ಲಿರಿಸಿಕೊಂಡು ಅದನ್ನು ಬಿಡಿಸುತ್ತಹೋಗುವಂತಿರುವ ನಾಟಕದ ಬೆಳವಣಿಗೆ,ಅನವಶ್ಯಕ ಮಾತು ಪಾತ್ರಗಳು ಬರದಂತೆ ಕಾದುಕೊಳ್ಳುವ ಶುಚಿತ್ವ, ಇವು ಪರ್ವತವಾಣಿಯವರ ನಾಟಕಗಳ ಕೆಲವು ಲಕ್ಷಣಗಳು.
          ನಿಜ, ಇವು ಮಾತಿನ ನಾಟಕಗಳು.ಅದನ್ನೇ ಪ್ರಧಾನವಾಗಿಟ್ಟುಕೊಂಡವು.ರಂಗಭೂಮಿಯ ಎಲ್ಲ ಸಾಧ್ಯತೆಗಳನ್ನೂ ಇವು ಪೂರೈಸಿಬಿಟ್ಟಿದ್ದವು ಎಂದಲ್ಲ ಆದರೆ ಇವು ಪೂರೈಸಿಕೊಟ್ಟ ಆದರೆ ಇಂದು ಅಭಾವವಾಗುತ್ತಿರುವ ಹಲವು ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಇಂದಿನ ರಂಗಭೂಮಿಯ ಹಿತಕ್ಕೆ ಪೂರಕ.

          ಹೀಗೆ ರಂಗಭೂಮಿಯ ಇತಿಹಾಸದ ಒಂದು ಕಾಲಘಟ್ಟದಲ್ಲಿ ತಮ್ಮ ಪಾತ್ರವನ್ನು ತುಂಬಸಮರ್ಥವಾಗಿ ನಿರ್ವಹಿಸಿದವರು ಪರ್ವತವಾಣಿ.ಸ್ವತಂತ್ರ,ರೂಪಾಂತರ - ಹೀಗೆ ಹಲವು ನಾಟಕಗಳ ರಚನೆಯ ಮೂಲಕ ಕಾಲದ ಕರೆಗೆ ಓಗೊಟ್ಟವರು. ಇಂದಿನ ಯುವ ಜನತೆಯಲ್ಲಿ ರಂಗವ್ಯಾಕರಣದ ಪರಿಚಯವೇ ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಅವರ ನಡುವೆ ಸುಲಭವಾಗಿ, ಸರಳವಾಗಿ, ಒಂದುಚಟುವಟಿಕೆಯಾಗಿ ರಂಗಪ್ರದರ್ಶನಗಳು ಬೆಳೆಯಬೇಕಾದ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚು. ಇದನ್ನು ಪರ್ವತವಾಣಿ ಚೆನ್ನಾಗಿ ಸಾಧಿಸಿದ್ದರು.
            ಹೀಗಾಗಿ ಪರ್ವತವಾಣಿಯವರನ್ನು ಕೇವಲ ಕಲಾ ಇತಿಹಾಸದ ಕಣ್ಣಿನಿಂದ ನೋಡಲಾಗದು. ಸಾಮಾಜಿಕ ಸ್ವಾಸ್ಥ್ಯ, ಒಪ್ಪಂದಗಳು, ಸಂಸ್ಕೃತಿ, ಭಾಷೆ - ಈ ನಿಟ್ಟಿನಿಂದಲೂ ಗಮನಿಸಬೇಕು.
     
                                                         - ಡಾ.ಶ್ರೀಪಾದ ಭಟ್
                                                               ಶಿರಸಿ
                       

Wednesday 12 February 2014

ಪುತ್ತಣ್ಣ ನಾಟಕೋತ್ಸವ - 2014 ಮತ್ತು ವಿಚಾರ ಸಂಕಿರಣ

                                        ಚಿಂತನ ರಂಗ ಅಧ್ಯಯನ ಕೇಂದ್ರ (ರಿ)ಉತ್ತರಕನ್ನಡ

                                                           ಪತ್ರಿಕಾ ಪ್ರಕಟಣೆ

    ಶಿರಸಿಯ ಸದಾನಂದ ಶಾನಭಾಗ(ಪುತ್ತಣ್ಣ) ಈ ನಾಡಿನ ಬಹದೊಡ್ಡ ಕಲಾಕಾರ. ಮುಂಬೈಯಿಂದ  ಹಿಡಿದು ಶಿರಸಿಯವರೆಗಿನ ಅವರ ಕಲಾಪಯಣದ ಆಳ, ವಿಸ್ತಾರ ಅನನ್ಯ. ಪ್ರಸಾದನ, ಪರಿಕರ, ನಟನೆ, ನಿದರ್ೇಶನ ಹೀಗೆ ಎಲ್ಲ ರಂಗದಲ್ಲಿಯೂ ವಿಶಿಷ್ಠತೆ  ಸಾಧಿಸಿದ ಇವರು ಜಿಲ್ಲೆಯ ರಂಗತಂಡಗಳಿಗೆ ನೀಡಿದ ಪ್ರತ್ಯಕ್ಷ, ಪರೋಕ್ಷ ಪ್ರೇರಣೆ ಅಪಾರ. ಇಂದು ಮಾರಿಗುಡಿ ಸುತ್ತಲಿನ ಹಲವು ಕಲಾವಿದರು ಅವರ ಮಾರ್ಗದರ್ಶನವನ್ನು ಸ್ಮರಿಸುತ್ತಲೇ ಇರುತ್ತಾರೆ. ಅವರ ನೆನಪಿನಲ್ಲಿ ನಾಟಕೋತ್ಸವವನ್ನು ಚಿಂತನ ರಂಗ ಅಧ್ಯಯನ ಕೇಂದ್ರ ಸಂಘಟಿಸುತ್ತಿದೆ.

    ಚಿಂತನ ರಂಗ ಅಧ್ಯಯನಕೇಂದ್ರ ಚಿಂತನ ಉತ್ತರಕನ್ನಡದ ಅಂಗ ಸಂಸ್ಥೆ.  ಹಲವು ವರ್ಷಗಳಿಂದ ರಂಗಭೂಮಿಯ ಬೇರೆ ಬೇರೆ ಆಯಾಮಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚಿಂತನದ ಗೆಳೆಯರು ಚದುರಿ ಹೋಗುತ್ತಿದ್ದ ರಂಗ ಚಟುವಟಿಕೆಗಳಿಗೆ ಒಂದು ತಾತ್ವಿಕ ಸ್ವರೂಪ ನೀಡಲು ಇದನ್ನು ಸ್ಥಾಪಿಸಿದರು. ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಆರೋಗ್ಯಕರ ಸಮಾಜ ಕಟ್ಟುವ ಚಿಂತನದ ಆಶಯಗಳನ್ನು ರಂಗಮುಖೇನ ಸಾಧಿಸುವದು ಇದರ ಪ್ರಮುಖ ಗುರಿ. ರಂಗಭೂಮಿಗೆ ಸಂಬಂಧಿಸಿದ ತಾತ್ವಿಕ ಚಿಂತನೆಗಳನ್ನು ನಡೆಸುತ್ತಲೇ ಪ್ರಯೋಗಗಳ ಮೂಲಕ ಅವುಗಳನ್ನು ಗಟ್ಟಿಗೊಳಿಸುವದು ಈ ಕೇಂದ್ರದ ಉದ್ದೇಶ. ರಂಗ ತರಬೇತಿನಡೆಸುವದು, ಪ್ರದರ್ಶನ ಸಂಘಟಿಸುವದು, ವಿಚಾರಸಂಕೀರ್ಣಗಳನ್ನು ಆಯೋಜಿಸುವದು, ಸಾಮಾಜಿಕ ಆಶಯಗಳಿಗಾಗಿ ಬೀದಿನಾಟಕ ಪ್ರಯೋಗಿಸುವದು, ಕಾಲೇಜುಗಳಲ್ಲಿ ರಂಗ ಶಿಕ್ಷಣ ನೀಡುವದು ಮುಖ್ಯವಾಗಿ ಮಕ್ಕಳ ರಂಗಭೂಮಿಯನ್ನು ಪ್ರಧಾನ ನೆಲೆಗೆ ತರುವದು, ರಜಾ ಶಿಬಿರ ನಡೆಸುವದು, ಶಿಕ್ಷಣದಲ್ಲಿ ರಂಗಕಲೆಯ ಆನ್ವಯಿಕ ಸಾಧ್ಯತೆಗಳನ್ನು ಅನ್ವೇಷಿಸುವದು, ಮಕ್ಕಳ ನಾಟಕ ರೆಪರ್ಟರಿಯನ್ನು ನಡೆಸುವದು - ಇವೇ ಮುಂತಾದ ಹಲವು ಯೋಜನೆಗಳನ್ನು ಕೇಂದ್ರ ಕಾರ್ಯ ರೂಪಕ್ಕೆ ತಂದಿದೆ. ಕೇಂದ್ರದ ಸದಸ್ಯರು ಸುಮಾರು 20 ವರ್ಷಗಳಿಂದ ರಾಜ್ಯದ ಹಲವುಕಡೆ ರಂಗ ಕಾಯಕದಲ್ಲಿ ತೊಡಗಿಸಿಕೊಂಡ ಅನುಭವವನ್ನು ಬಳಸಿ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. 2003ರಿಂದ ರಂಗ ತಿರುಗಾಟದ ರೆಪರ್ಟರಿ ನಡೆಸುತ್ತಿದೆ. ಕೇಂದ್ರವು ತನ್ನದೇ ಆದ ಕಾರ್ಯಕ್ರಮಗಳ ಜತೆ ಹಲವು ಸಂಸ್ಥೆಗಳೊಡನೆ ಸೇರಿಯೂ ಕಾರ್ಯ ನಿರ್ವಹಿಸಿದೆ. ಡಯಟ್ ಗಳಲ್ಲಿ ಶಿಕ್ಷಕರಿಗಾಗಿ ರಂಗ ತರಬೇತಿ ನೀಡಿದೆ, ಮೈಸೂರು ರಂಗಾಯಣದ ಮಕ್ಕಳ ನಾಟಕ ಯೋಜನೆಗಳಲ್ಲಿ ಭಾಗವಹಿಸಿದೆ. ಹಲವು ಸಂಸ್ಥೆಗಳ ಸಹಯೋಗದಲ್ಲಿ ಬೀದಿನಾಟಕಗಳ ತಿರುಗಾಟ ನಡೆಸಿದೆ. ಕಳೆದ 5 ವರ್ಷಗಳಿಂದ ಪುತ್ತಣ್ಣನ ಹೆಸರಿನಲ್ಲಿ ರಂಗೋತ್ಸವವನ್ನು ನಡೆಸುತ್ತಿದೆ.

    
    ಈ ವರ್ಷ ತುಂಬ ವಿಶಿಷ್ಟವಾಗಿ ರಾಜ್ಯ ಮಟ್ಟದ ರಂಗೋತ್ಸವವನ್ನು ನಡೆಸಲು ಸಂಘಟನೆ ತೀರ್ನಿಮಾನಿಸಿದೆ. ಫೆಬ್ರವರಿ 15 ಮತ್ತು 16 ರಂದು ಶಿರಸಿಯಲ್ಲಿ ಹಾಗೂ 17 ರಂದು ಸಿದ್ದಾಪುರದಲ್ಲಿ ಹೀಗೆ 3 ದಿನಗಳು ಈ ನಾಟಕೋತ್ಸವ ನಡೆಯಲಿದೆ. 15ರಂದು ಶಿರಸಿಯ ಸಹ್ಯಾದ್ರಿ ರಂಗ ಮಂದಿರದಲ್ಲಿ ಆರಂಭಗೊಳ್ಳಲಿರುವ ಈ ಉತ್ಸವವನ್ನು ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರಹೆಗಡೆಯವರು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಶ್ರೀಕಾಂತ ತಾರೀಬಾಗಿಲು, ಶ್ರೀಮತಿ ಭಾಗೀರಥಿಹೆಗಡೆಯವರು, ವಿ ಎನ್ಮಲ್ಲಿಕಾರ್ಜುನ ಸ್ವಾಮಿ, ರಾಜು ಮೊಗವೀರ, ಎಂ.ಎಸ್.ಪ್ರಸನ್ನ ಕುಮಾರ, ಸವಿತಾ ಪುತ್ತಣ್ಣ ಭಾಗವಹಿಸಲಿದ್ದು ವಿಡಂಬಾರಿಯವರು ಅಧ್ಯಕ್ಷತೆವಹಿಸಲಿದ್ದಾರೆ. ಸಂಜೆ 6.45ರಿಂದ ರಥಬೀದಿಗೆಳೆಯರು ಉಡುಪಿ ಇವರು, ಅಭಿಲಾಷಾ ಎಸ್. ಅವರು ರಚಿಸಿದ ಸಂಗ್ಯಾ ಬಾಳ್ಯಾ ಆಧರಿತ ನಾಟಕ 'ಗಂಗಿ ಪರಸಂಗ' ನಾಟಕವನ್ನು ಡಾ.ಶ್ರೀಪಾದ ಭಟ್ ಅವರ ನಿರ್ದೇಶನದಲ್ಲಿ ಅಭಿನಯಿಸಲಿದ್ದಾರೆ. 16ರ ಬೆಳಿಗ್ಗೆ 9:30ರಿಂದ ಗಣೇಶ ನೇತ್ರಾಲಯದ ನಯನ ಸಭಾಂಗಣದಲ್ಲಿ ದೇವಾನಂದ ಗಾಂವಕರ ಹಾಗೂ ಸಂಗಡಿಗರಿಂದ ರಂಗ ಗೀತೆಗಳ ಗಾಯನ ಹಾಗೂ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಲಿದ್ದು  ಸಾಹಿತ್ಯ ಸಮುದಾಯ ಬೆಂಗಳೂರು ಇವರು ವಿಚಾರ ಸಂಕಿರಣಕ್ಕೆ  ಸಹಯೋಗ ನೀಡಲಿದ್ದಾರೆ.


ಎನ್.ಎಸ್.ಡಿ.ಪದವೀಧರರಾದ ಗೋಪಾಲ ಕೃಷ್ಣ ನಾಯರಿಯವರು ಇದನ್ನು ಉದ್ಘಾಟಿಸಲಿದ್ದು, ಖ್ಯಾತ ನಿದರ್ೇಶಕ ಇಕ್ಬಾಲ ಅಹಮದ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾಮಕೃಷ್ಣ ಭಟ್ಟ ದುಂಡಿಯವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ರಂಗಭೂಮಿ ಮತ್ತು ಸಿನೆಮಾದಲ್ಲಿ ಹೆಸರಾದ ಪ್ರಕಾಶ ಬೆಳವಾಡಿ, ರಂಗ ನಿದರ್ೇಶಕ ಪ್ರಕಾಶ ಗರುಡ, ನಾಟಕ ರಚನೆ ಮತ್ತು ನಿದರ್ೇಶನದಲ್ಲಿ ಹೆಸರಾದ ಅಭಿಲಾಷಾ, ಖ್ಯಾತ ಸಾಹಿತಿ ನಿಂಗು ಸೊಲಗಿ ಇವರು ಕಳೆದ ದಶಕದಲ್ಲಿ ರಂಗಭೂಮಿ ನಡೆದ ದಾರಿಯನ್ನು, ಅದರ ಚಯರ್ೆಯನ್ನು ಚಚರ್ಿಸಲಿದ್ದಾರೆ. ಅವರೊಂದಿಗಿನ ಸಂವಾದದಲ್ಲಿ ರಾಜ್ಯದ ಹಲವು ರಂಗ ಕಮರ್ಿಗಳು ಭಾಗವಹಿಸಲಿದ್ದಾರೆ. ಸಂಜೆ 6ರಿಂದ ಚಿಂತನ ರಂಗ ಅಧ್ಯಯನ ಕೇಂದ್ರದ ಕಲಾವಿದರು ರಂಗ ಸಂಗೀತ ನಡೆಸಿಕೊಡಲಿದ್ದಾರೆ. 6:30ರಿಂದ ಬೆಂಗಳೂರು ಸಮುದಾಯ ತಂಡದವರು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾನರ್ಾಡರು ರಚಿಸಿದ ಬಹು ಚಚರ್ಿತ ನಾಟಕ 'ತುಘಲಕ್' ಅಭಿನಯಿಸಲಿದ್ದಾರೆ. ಇದರ ನಿದರ್ೇಶನವನ್ನು ಡಾ.ಸ್ಯಾಮ ಕುಟ್ಟಿ ಪಟ್ಟಂಕರ್ರಿ ಮತ್ತು ಡಾ.ಶ್ರೀಪಾದ ಭಟ್ ಮಾಡಿದ್ದಾರೆ.

17ರಂದು ಸಂಜೆ 6ಕ್ಕೆ ಸಿದ್ದಾಪುರ ಶಂಕರ ಮಠದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಸಮುದಾಯದ ರಾಜ್ಯ ಕಾರ್ಯದರದಶಿ೵ ಸುರೇಂದ್ರ ರಾವ್, ಬಸವರಾಜು ಹೂಗಾರ,ಆರ್.ಪಿ.ಹೆಗಡೆ,ವಿಜಯ ಹೆಗಡೆ ದೊಡ್ಮನೆ ಪಾಲ್ಗೊಳ್ಳಲಿದ್ದಾರೆ. ನಂತರ ಚಿಂತನ ರಂಗ ಅಧ್ಯಯನ ಕೇಂದ್ರದಿಂದ ಡಾ.ಶ್ರೀಪಾದ ಭಟ್ ಇವರ ನಿರ್ದೇಶಿಸಿದ 'ಕನ್ನಡ ಕಾವ್ಯ ಕಥನಗಳ ವಾಚಿಕಾಭಿನಯ 'ಕಾವ್ಯ ರಂಗ' ಪ್ರಯೋಗಗೊಳ್ಳಲಿದ್ದು ನಂತರ ಮಂಗಳೂರಿನ ತರಿಕಿಟ ಕಲಾ ಕಮ್ಮಟ ತಂಡದವರು ಖ್ಯಾತ ರಂಗ ತಜ್ಞ ಶ್ರೀ ಪ್ರಸನ್ನ ಅವರು ರಚಿಸಿ ನಿರ್ದೇಶಿಸಿದ 'ಮೆಕ್ಕಾ ದಾರಿ' ಎಂಬ ನಾಟಕವನ್ನು ಪ್ರದರದಶಿಸಲಿದ್ದಾರೆ..
. ಶ್ರೀ ವಿ.ಪಿ.ಹೆಗಡೆ ವೈಶಾಲಿಯವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದ್ದು ಶ್ರೀ ಎಂ.ಎಚ್.ನಾಯ್ಕ ಕಾರ್ಯದಶರ್ಿಗಳಾಗಿ, ಹಲವು ರಂಗಾಸಕ್ತರು ಸದಸ್ಯರಾಗಿ ಈಗಾಗಲೇ ಉತ್ಸವದ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ತಮ್ಮೆಲ್ಲರ ಸಹಕಾರ ಮತ್ತು ಮಾರ್ಗದರ್ಶನ ಈ ದಿಸೆಯಲ್ಲಿ ಅಗತ್ಯವಾಗಿದ್ದು ಉತ್ಸವದಲ್ಲಿ ಸದಾ ನಮ್ಮ ಜತೆಗಿರಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.